ಕರಾವಳಿ

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಡಾ| ಅಬ್ದುಲ್ ಶಕೀಲ್ ನೇಮಕ

Pinterest LinkedIn Tumblr

ಬೆಂಗಳೂರು : ಅಖಿಲ ಭಾರತ ಕಾಂಗ್ರೆಸ್ (ಐ) ಪಕ್ಷ ಎಐಸಿಸಿ ಇದರ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ನದೀಮ್ ಜಾವೇದ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷ ವೈ. ಸಹೀದ್ ಅಹಮ್ಮದ್ ಅವರ ಸಲಹೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಚಿವ, ಮಂಗಳೂರು (ಉಳ್ಳಾಲ) ಶಾಸಕ ಯು. ಟಿ ಖಾದರ್ ಹಾಗೂ ಯುವ ಕಾಂಗ್ರೇಸ್ ಆಧ್ಯಕ್ಷ ಮಿಥುನ್ ರೈ ರವರ ಶಿಫಾರಾಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಡಾ| ಅಬ್ದುಲ್ ಶಕೀಲ್ ಮಂಗಳೂರು ಅವರನ್ನು ನೇಮಿಸಿರುವರು.

ಶುಕ್ರವಾರ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷ ವೈ. ಸಹೀದ್ ಅಹಮ್ಮದ್ ಅವರು ಡಾ|ಶಕೀಲ್ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಂತರಿಸಿ, ಅಭಿನಂದಿಸಿ ಪಕ್ಷ ಮತ್ತು ಸಮಾಜ ಸೇವೆಯಲ್ಲಿ ಇನ್ನಷ್ಟು ತೊಡಗಿಸಿ ಕೊಳ್ಳುಂತೆ ತಿಳಿಸಿದರು.
ಡಾ| ಶಕೀಲ್ ಅವರು ಮಂಗಳೂರು ತಾಲೂಕಿನ ದೇರಳಕಟ್ಟೆ ರೆಂಜಡಿ ನಿವಾಸಿ ಆಗಿದ್ದು. ಸಮಾಜ ಸೇವಕರಾಗಿ ಶ್ರಮಿಸುತ್ತಿದ್ದಾರೆ.

Comments are closed.