ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರದಲ್ಲಿ ನೂತನವಾಗಿ ಏಳು ಮಂದಿ ಮಂತ್ರಿ ಗಿರಿ ಏರಿದ ಬೆನ್ನಲ್ಲೇ ಕೆಲ ಶಾಸಕರು ಬಾರೀ ಅಸಮಾಧಾನ ವ್ಯಕ್ತಪಡಿಸಿದ್ದು ಈ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಜಾಲತಾಣದ ಮೂಲಕ ಅಭಿಪ್ರಾಯವೊಂದನ್ನು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ‘ಅಧಿಕಾರದಲ್ಲಿರುವವರನ್ನು ನೋಡಿಯೂ ಇರದ, ನೋಡುವ ಇಚ್ಚೆಯೂ ಇರದ ಕೋಟ್ಯಾಂತರ ಕಾರ್ಯಕರ್ತರ ತ್ಯಾಗದ ಫಲಸ್ವರೂಪ ನಾವಿಂದು ಇಲ್ಲಿ ನಿಂತಿದ್ದೇವೆ.
ಅಧಿಕಾರದಲ್ಲಿರುವವರನ್ನು ನೋಡಿಯೂ ಇರದ, ನೋಡುವ ಇಚ್ಚೆಯೂ ಇರದ ಕೋಟ್ಯಾಂತರ ಕಾರ್ಯಕರ್ತರ ತ್ಯಾಗದ ಫಲಸ್ವರೂಪ ನಾವಿಂದು ಇಲ್ಲಿ ನಿಂತಿದ್ದೇವೆ.
ಆ ಕಾರ್ಯಕರ್ತ ಅಧಿಕಾರದಲ್ಲಿರುವವರ ಮನೆ, ಕಚೇರಿ, ವಾಹನದ ಹಿಂದೆ ಮುಂದೆ ಎಲ್ಲೂ ಕಾಣಸಿಗುವುದಿಲ್ಲ. #ದೇವದುರ್ಲಭಕಾರ್ಯಕರ್ತ
1/2— C T Ravi 🇮🇳 ಸಿ ಟಿ ರವಿ (@CTRavi_BJP) January 15, 2021
ಆ ಕಾರ್ಯಕರ್ತ ಅಧಿಕಾರದಲ್ಲಿರುವವರ ಮನೆ, ಕಚೇರಿ, ವಾಹನದ ಹಿಂದೆ ಮುಂದೆ ಎಲ್ಲೂ ಕಾಣಸಿಗುವುದಿಲ್ಲ. ತನ್ನ ಬೂತನ್ನು ಗೆಲ್ಲಿಸುವುದು ಹೇಗೆ ಎಂಬುದನ್ನು ಯೋಚಿಸುತ್ತಾ, ಕಾರ್ಯತತ್ಪರನಾಗಿರುತ್ತಾನೆ.
ಕಾರ್ಯಕರ್ತರ “ನಿಸ್ವಾರ್ಥ” ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ. ಇವತ್ತು ನಾವೇನೇ ಆಗಿದ್ದರೂ ಅದು ನಮ್ಮ ತಳಮಟ್ಟದ ಕಾರ್ಯಕರ್ತ ಕೊಟ್ಟ ಭಿಕ್ಷೆಯೇ ಹೊರತು ಬೇರೆ ಏನೂ ಅಲ್ಲ’ ಎಂದು ಬರೆದುಕೊಂಡಿದ್ದಾರೆ.
Comments are closed.