ಕರಾವಳಿ

ಅತ್ಯುತ್ತಮ ಸಂಸದ ಎಂದು ಆಯ್ಕೆಯಾದ ತುಳು-ಕನ್ನಡಿಗೆ ಗೋಪಾಲ ಸಿ ಶೆಟ್ಟಿಯವರಿಗೆ ಅಭಿನಂದನೆ

Pinterest LinkedIn Tumblr

ಮುಂಬಯಿ : ಇತ್ತೀಚೆಗೆ ಅತ್ಯುತ್ತಮ ಸಂಸದ ಎಂದು ಆಯ್ಕೆಯಾದ ಉತ್ತರ ಮುಂಬಯಿಯ ಸಂಸದ ತುಳು-ಕನ್ನಡಿಗೆ ಗೋಪಾಲ ಸಿ ಶೆಟ್ಟಿಯವರನ್ನು ನಗರದ ಬಿಲ್ಲವರ ಅಸೋಷಿಯೇಶನ್ ಮುಂಬಯಿ ಅಭಿನಂದಿಸಿ ಸನ್ಮಾನಿಸಿದೆ.

ಬಿಲ್ಲವರ ಅಸೋಷಿಯೇಶನ್ ಮುಂಬಯಿ ಯ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಅಸೋಷಿಯೇಶನ್ ನ ಯುವ ವಿಭಾಗದ ಕಾರ್ಯಾಧ್ಯಕ್ಷ ನಾಗೇಶ್ ಕೋಟ್ಯಾನ್, ಬೋರಿವಲಿ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ರಜಿತ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದು ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಸಂಸದರೆನಿಸಿಕೊಂಡ ಗೋಪಾಲ ಶೆಟ್ಟಿಯವರನ್ನು ಆತ್ಮೀಯವಾಗಿ ಅಭಿನಂದಿಸಿದರು.

Comments are closed.