ಕರಾವಳಿ

ಗಂಗಾಜಲದ ಮೂಲಕ ಕೋವಿಡ್-19ಗೆ ಚಿಕಿತ್ಸೆ ನೀಡುವ ಅಗ್ಗದ ಔಷಧಿಯು ಶೀಘ್ರದಲ್ಲೇ ಪೂರೈಸಲು ಪ್ರಯತ್ನ ! – ನ್ಯಾಯವಾದಿ ಅರುಣ ಕುಮಾರ ಗುಪ್ತಾ

Pinterest LinkedIn Tumblr

ಬನಾರಸ ಹಿಂದೂ ವಿಶ್ವವಿದ್ಯಾಲಯವು (BHU) ಇತ್ತೀಚೆಗೆ ಕೈಗೊಂಡ ವೈದ್ಯಕೀಯ ಸಂಶೋಧನೆಯಲ್ಲಿ ಪವಿತ್ರ ಗಂಗಾ ನದಿಯ ನೀರಿನಲ್ಲಿ ಲಭ್ಯವಿರುವ ಬ್ಯಾಕ್ಟಿರಿಯಾಫಾಜ್ ಎಂಬ ಜೀವಾಣುವು ಕೊರೋನಾ ವಿಷಾಣುವನ್ನು ನಿಷ್ಕ್ರಿಯಗೊಳಿಸಿ ನಾಶ ಮಾಡುತ್ತದೆ, ಎಂಬುದು ಗಮನಕ್ಕೆ ಬಂದಿದೆ.

ಈ ಕುರಿತಾದ ಶೋಧ ನಿಬಂಧವು ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ‘ಹಿಂದವಿ (Hindawi) ಇಂಟರನ್ಯಾಶನಲ್ ಜರ್ನಲ್ ಆಫ್ ಮೈಕ್ರೋಬಯೋಲಾಜಿ’ಯಲ್ಲಿ ಪ್ರಕಟವಾಗಿದೆ. ಜಗತ್ತಿನಾದ್ಯಂತದ ಅನೇಕ ವೈದ್ಯರು ಹಾಗೂ ವಿಜ್ಞಾನಿಗಳು ಇದರ ಅಧ್ಯಯನ ಮಾಡಿ ಶ್ಲಾಘಿಸಿದ್ದಾರೆ.

ಗಂಗೋತ್ರಿಯ ಗಂಗಾಜಲದಿಂದ ನಿರ್ಮಿಸಲಾಗಿರುವ ‘ನೋಝಲ್-ಸ್ಪ್ರೇ’ ಇದು ಕೊರೊನಾಗೆ ಪರಿಣಾಮಕಾರಿಯಾಗಿದೆ. ಭಾರತೀಯ ಆಯುರ್ವಿಜ್ಞಾನ ಸಂಶೋಧನ ಪರಿಷತ್ತಿನ (ICMR) ಅನುಮತಿ ಸಿಕ್ಕಿದ ನಂತರ ದೇಶದ ಜನತೆಗಾಗಿ ಇದನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರುತ್ತೇವೆ. ಇದರ ಬೆಲೆ 20ರಿಂದ 35 ರೂಪಾಯಿಗಳು ಇರುವುದರಿಂದ ಅದು ಬಡ ವ್ಯಕ್ತಿಗಳಿಗೂ ಕೈಗೆಟುಕಬಹುದು, ಅದೇರೀತಿ ಇದು ಕೊರೋನಾದ ಇತರ ಲಸಿಕೆಗಳಂತೆ ಅಪಾಯಕಾರಿ ಹಾಗೂ ದುಬಾರಿ ಇಲ್ಲ  ಎಂದು ಗಂಗಾ ನದಿಯನ್ನು ಕಾಪಾಡಲು ಬೃಹತ್ಪ್ರಮಾಣದಲ್ಲಿ ಕಾರ್ಯ ಮಾಡುವ ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ನ್ಯಾಯಮಿತ್ರ ಅರುಣ ಕುಮಾರ ಗುಪ್ತಾ ಇವರು ಪ್ರತಿಪಾದಿಸಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಕೋವಿಡ್-19 ಗೆ ಗಂಗಾಜಲವು ರಾಮಬಾಣ ಉಪಾಯವೇ ?’ ಈ ವಿಷಯದಲ್ಲಿ ಪ್ರಥಮಬಾರಿ ಆನ್‌ಲೈನ್ ‘ಸನಾತನ ಸಂವಾದ’ದಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ  ಚೇತನ ರಾಜಹಂಸ ಇವರು ಅವರ ಸಂದರ್ಶನವನ್ನು ತೆಗೆದುಕೊಂಡರು. ಫೇಸ್‌ಬುಕ್ ಹಾಗೂ ಯೂ-ಟ್ಯೂಬ್ ಮಾಧ್ಯಮದಿಂದ ಈ ಕಾರ್ಯಕ್ರಮವನ್ನು 23 ಸಾವಿರಕ್ಕಿಂತ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರು.

ಈ ಸಮಯದಲ್ಲಿ ನ್ಯಾಯವಾದಿ ಗುಪ್ತಾ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಭಾರತದ ಪವಿತ್ರ ಗಂಗಾಜಲದಲ್ಲಿ ಸಿಗುವ ಬ್ಯಾಕ್ಟೆರಿಯಾಫಾಜ್ ಜೀವಾಣು ಇದು ಅನೇಕ ರೋಗಗಳನ್ನು ಉತ್ಪತ್ತಿ ಮಾಡುವ ಜೀವಾಣುಗಳನ್ನು ನಾಶ ಮಾಡುತ್ತದೆ, ಇದು ಅನೇಕ ಸಲ ವೈಜ್ಞಾನಿಕ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಆದ್ದರಿಂದ ನಾವು ‘ಬನಾರಸ ಹಿಂದೂ ವಿಶ್ವವಿದ್ಯಾಲಯ’ದ ಡಾಕ್ಟರರ ಸಹಾಯದಿಂದ ಕೊರೋನಾದ ಮೇಲೆ ಸಂಶೋಧನೆಯನ್ನು ಮಾಡಿದೆವು. ಅದರಲ್ಲಿ ನಮಗೆ ಯಶಸ್ಸು ಸಿಕ್ಕಿದೆ.

ಗಂಗಾಸ್ನಾನ ಹಾಗೂ ಗಂಗಾ ನದಿಯ ಮಹಾತ್ಮೆಯನ್ನು ನಮ್ಮ ಋಷಿಮುನಿಗಳು ಅನೇಕ ಧರ್ಮಗ್ರಂಥಗಳಲ್ಲಿ ಹೇಳಿದ್ದಾರೆ. ಈಗ ಅದು ವೈಜ್ಞಾನಿಕ ಸಂಶೋಧನೆಯಿಂದ ಸಾಬೀತಾಗುತ್ತಿದ್ದು ಅದು ಸಮಾಜದ ತನಕ ತಲುಪಬೇಕಿದೆ. ಇಂದು ಭಾರತೀಯ ಸರಕಾರಿ ಸಂಸ್ಥೆಗಳು ಈ ಸಂಶೋಧನೆಯಲ್ಲಿ ಸಹಾಯ ಮಾಡದೇ ಅಡಚಣೆಯನ್ನುಂಟು ಮಾಡುತ್ತಿವೆ. ಆದ್ದರಿಂದ ಕೇಂದ್ರ ಸರಕಾರವು ಇದರತ್ತ ಗಮನಹರಿಸುವುದು ಅಗತ್ಯವಾಗಿದೆ.

ಕೊರೋನಾದ ಆರಂಭಿಕ ಕಾಲದಲ್ಲಿ ಭಾರತದ ಕೆಲವು ರಾಜ್ಯಗಳಲ್ಲಿ ಮೃತ್ಯುದರ ಶೇ. 40 ರಿಂದ 45 ರಷ್ಟು ಇರುವಾಗ ಗಂಗಾನದಿಯ ದಡದಲ್ಲಿ ವಾಸಿಸುವ ಹಳ್ಳಿಯಲ್ಲಿ ಮೃತ್ಯುದರವು ಶೇ. 5 ಕ್ಕಿಂತಲೂ ಕಡಿಮೆ ಇತ್ತು, ಅದೇರೀತಿ ರೋಗಿಗಳು ಗುಣಮುಖರಾಗಿರುವ ಪ್ರಮಾಣವೂ ಹೆಚ್ಚಿತ್ತು. ಇವೆಲ್ಲವು ಸರಕಾರಿ ಅಂಕಿಅಂಶಗಳಾಗಿವೆ.

ಗಂಗೆಯ ನೀರಿನ ಉಪಯೋಗದಿಂದಾಗಿ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಅವರ ಮೇಲೆ ಕೊರೋನಾದ ಪರಿಣಾಮವಾಗುವುದಿಲ್ಲ. ಮಾಘಮೇಳ ಹಾಗೂ ಕುಂಭಮೇಳದ ಸಮಯದಲ್ಲಿ 10 ರಿಂದ 12 ಕೋಟಿ ಜನರು ಗಂಗಾ ಸ್ನಾನಕ್ಕಾಗಿ ಒಟ್ಟಿಗೆ ಸೇರುತ್ತಾರೆ. ಅದರಲ್ಲಿ ಅನೇಕರಿಗೆ ವಿವಿಧ ರೀತಿಯ ರೋಗಗಳು ಹಾಗೂ ಚರ್ಮರೋಗಗಳೂ ಇರುತ್ತವೆ. ಆದರೆ ಗಂಗಾ ಸ್ನಾನ ಮಾಡಿದ್ದರಿಂದ ಜನರ ರೋಗ ನಿರೋಧಕಶಕ್ತಿ ಹೆಚ್ಚಾಗಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಅದೇರೀತಿ ಗಂಗಾ ಹಾಗೂ ಯಮುನಾ ಈ ಎರಡೂ ನದಿಗಳಲ್ಲಿನ ಮೂಲಭೂತ ಘಟಕದ್ರವ್ಯಗಳು ಹಾಗೂ ಆಕ್ಸಿಜನ್‌ನ ಪ್ರಮಾಣ ತುಂಬಾ ಭಿನ್ನವಾಗಿದೆ; ಆದರೆ ಯಾವಾಗ ಯಮುನಾ ನದಿಯ ದೊಡ್ಡ ಪ್ರವಾಹವು ಪ್ರಯಾಗದಲ್ಲಿ ಸಣ್ಣದಾದ ಗಂಗಾ ನದಿಯ ಪ್ರವಾಹದೊಂದಿಗೆ ಸೇರುತ್ತದೆಯೂ, ಆಗ ಯಮುನಾದಲ್ಲಿಯ ಎಲ್ಲ ಘಟಕದ್ರವ್ಯಗಳು ಗಂಗಾನದಿಯ ಘಟಕದ್ರವ್ಯಗಳಂತೆ ಆಗುತ್ತದೆ; ಆದ್ದರಿಂದ ಅದನ್ನು ಮುಂದೆ ಗಂಗಾನದಿ ಎಂದೇ ಕರೆಯಲಾಗುತ್ತದೆ. ಹೀಗೆ ಒಟ್ಟು 300 ನದಿಗಳು ಗಂಗಾ ನದಿಗೆ ಬಂದು ಸೇರುತ್ತವೆ’ ಎಂದು ಕೂಡ ಅವರು ಹೇಳಿದರು.

Comments are closed.