ಕರಾವಳಿ

ಎಂಸಿಎಫ್ ಸಂಸ್ಥೆಯ ಸಮಾಜಮುಖೀ ಕಾರ್ಯಗಳು ಶ್ಲಾಘನೀಯ : ಶಾಸಕ ಡಾ.ಭರತ್ ಶೆಟ್ಟಿ

Pinterest LinkedIn Tumblr

ಎಂಸಿಎಫ್ ವತಿಯಿಂದ ರೂ.11 ಲಕ್ಷ ವೆಚ್ಚದಲ್ಲಿ ಕಾವೂರು ಪಳನೀರು ಅಂಗನವಾಡಿ ಕೇಂದ್ರ ಪುನರ್ ನವೀಕರಣ

ಮಂಗಳೂರು : ಅಂಗನವಾಡಿ ಕೇಂದ್ರವನ್ನು ಪುನರ್ ನವೀಕರಣ ಮಾಡಿಕೊಟ್ಟು ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಟ್ಟ ಎಂಸಿಎಫ್ ಸಂಸ್ಥೆಯ ಸಮಾಜಮುಖೀ ಕಾರ್ಯಗಳು ಶ್ಲಾಘನೀಯ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಹೇಳಿದರು.

ನಗರದ ಹೊರವಲಯದ ಕಾವೂರು ಸಮೀಪದ ಪಳನೀರಿನಲ್ಲಿ ಎಂಸಿಎಫ್ ವತಿಯಿಂದ 11ಲಕ್ಷ ರೂ.ವೆಚ್ಚದಲ್ಲಿ ಪುನರ್ ನವೀಕರಣಗೊಳಿಸಿದ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ, ಅಂಗವಿಕಲರಿಗೆ ಕೃತಕ ಅಂಗಾಂಗ ವಿತರಣೆ,ಆರೋಗ್ಯ ತಪಾಸಣೆ ಕಾರ್ಯಕ್ರಮ ಮತ್ತಿತರ ಕೆಲಸಗಳನ್ನು ಆಸಕ್ತಿಯಿಂದ ಎಸ್ಅರ್ ನಿಧಿಯಿಂದ ಮಾಡುತ್ತಾ ಬಂದಿದ್ದಾರೆ.ಸರಕಾರದ ಜತೆ ಕೈ ಜೋಡಿಸಿ ಇಂತಹ ಉತ್ತಮ ಕೆಲಸ ಕಾರ್ಯಗಳಾದಾಗ ಜನರಿಗೆ ಉತ್ತಮ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಿದೆ ಎಂದರು.

ಇದೇ ಸಂದರ್ಭ ಶಾಸಕರು,ಎಂಸಿಎಫ್ ಅಧಿಕಾರಿಗಳು,ಮನಪಾ ಸದಸ್ಯರಾದ ಸುಮಂಗಲಾ ರಾವ್ ಅವರನ್ನು ಸಮ್ಮಾನಿಸಲಾಯಿತು.

Comments are closed.