ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ” ಮುಕ್ಕೋಟಿ ದ್ವಾದಶಿ ” ಪ್ರಯುಕ್ತ ಶನಿವಾರ ಪ್ರಾತಃ ಕಾಲ ಶ್ರೀ ಶ್ರೀನಿವಾಸ ದೇವರ ಪಲ್ಲಕಿ ಉತ್ಸವವು ಶ್ರೀ ದೇವಳದಿಂದ ಟ್ಯಾಂಕ್ ಕಾಲೋನಿ ಯಲ್ಲಿರುವ ಶ್ರೀ ದೇವರ ಕೆರೆಯಲ್ಲಿ ತೀರ್ಥ ಸ್ನಾನ ಬಳಿಕ ಶ್ರೀ ದೇವರ ಸ್ವಯಂಸೇವಕರ ಭುಜ ಸೇವೆಯೊಂದಿಗೆ, ಶ್ರೀ ವೀರ ವೆಂಕಟೇಶ್ ಭಜನಾ ಮಂಡಳಿಯ ಸೇವಕರು ಭಜನಾ ಸೇವೆಯೊಂದಿಗೆ ಹಗಲು ಪೇಟೆ ಉತ್ಸವ ಜರಗಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸಿ . ಎಲ್ ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.