ಕರಾವಳಿ

ಶಾಸಕ ಕಾಮತ್ ಜನ್ಮದಿನ ಹಿನ್ನೆಲೆ : ಅಭಿಮಾನಿ ಬಳಗದಿಂದ ಗೋಶಾಲೆಗೆ ಮೇವು ಸಮರ್ಪಣೆ

Pinterest LinkedIn Tumblr

ಮಂಗಳೂರು : ಶಾಸಕ ವೇದವ್ಯಾಸ್ ಕಾಮತ್ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ಪಜೀರು ಗೋವನಿತಾಶ್ರಮಕ್ಕೆ ಮೇವು ಸಮರ್ಪಿಸಲಾಯಿತು.

ಈ ವೇಳೆ ಮಾತನಾಡಿದ ಗೋಶಾಲೆಯ ಮೇಲ್ವಿಚಾರಕರಾದ ಕುಮಾರ ಸ್ವಾಮಿ ಅವರು, ಗೋವು ವಿಶ್ವಕ್ಕೆ ಅಮೃತವುಣಿಸುವ ಕರುಣಾಮಯಿ. ನಿಷ್ಕಲ್ಮಶ ಮನಸ್ಸಿನಿಂದ ಜಗತ್ತಿಗೆ ಉಪಕಾರಿಯಾಗಿರುವ ಗೋವಿಗೆ ಶಾಸಕ ವೇದವ್ಯಾಸ್ ಕಾಮತ್ ಅಭಿಮಾನಿ ಬಳಗದವರು ಗೋಗ್ರಾಸವನ್ನು ನೀಡಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶಾಸಕ ವೇದವ್ಯಾಸ್ ಕಾಮತ್ ಅವರ ಅಭಿಮಾನಿಗಳು ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿರುವುದು ಸಂತಸವಾಗಿದೆ. ಶಾಸಕರ ರಾಜಕೀಯ ಭವಿಷ್ಯ, ಆಯುರ್ ಆರೋಗ್ಯ, ಸುಖ ಶಾಂತಿ ನೆಮ್ಮದಿಯು ಜೊತೆಯಾಗಿರಲಿ ಎಂದು ಹಾರೈಸಿದರು.

Comments are closed.