ಕರಾವಳಿ

ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಸದನಕ್ಕೆ ಮಹಿಳಾ ವೇದಿಕೆಯಯಿಂದ ಬೃಹತ್ ಕಾಲು ದೀಪ ಕೊಡುಗೆ

Pinterest LinkedIn Tumblr

ಮಂಗಳೂರು : ಸುಬ್ರಹ್ಮಣ್ಯ ಸಭಾ ಸದನಕ್ಕೆ ಮಹಿಳಾ ವೇದಿಕೆಯಯಿಂದ ಅಧ್ಯಕ್ಷೆ ಕುಸುಮಾ ನವೀನ್.ಕಾರ್ಯದರ್ಶಿ ಪುಷ್ಪವತಿ ಶ್ರೀನಿವಾಸ್. ಸ್ನೇಹ ಲತಾ ದಿವಾಕರ. ಡಾಕ್ಟರ್ ಜಯಲಕ್ಷ್ಮಿ. ಭಾಗ್ಯ ಚಂದ್ರ ರಾವ್ ಬೆಂಗಳೂರು. ಶ್ರೀನಿವಾಸ್ ರಾವ್.ಸುಬ್ಬರಾವ್ ಪೊಳಲಿ. ದಿವಾಕರ ರಾವ್ ಇವರು ಬೃಹತ್ ಗಾತ್ರದ ಕಾಲು ದೀಪ ಕೊಡುಗೆಯಾಗಿ ನೀಡಿದರು.

ಭಜನಾ ಗುರುಗಳಾದ ಸುಬ್ಬರಾವ್ ಪೊಳಲಿ ದೀಪ ಸಭಾದ ಗಣ್ಯರೊಂದಿಗೆ ದೀಪ ಬೆಳಗಿಸಿ ಶುಭ ಹಾರೈಸಿ ಶಾರದಾಂಬ ಭಜನಾ ಮಂಡಳಿ ಸುಬ್ರಹ್ಮಣ್ಯ ಸದನದ ಶಿಷ್ಯ ರೊಂದಿಗೆ ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ಸಭಾದ ಅಧ್ಯಕ್ಷರು ಹರ್ಷ ಕುಮಾರ್ ಕೇದಿಗೆ. ಉಪಾಧ್ಯಕ್ಷೆ ಸುಮಂಗಲಾಪ್ರಭಾಕರ್. ಕಾರ್ಯದರ್ಶಿ ಕರುಣಾಕರ ಬೆಳ್ಳೆ. ಕೋಶಾದಿಕಾರಿ ಶ್ರೀಕಾಂತರಾವ್. ಯುವವೇದಿಕೆ ಅಧ್ಯಕ್ಷರು ಮನೀಶ್ ರಾವ್ ಉಪಸ್ತಿತರಿದ್ದರು.

ಭಾವಚಿತ್ರ ಸ್ವರ್ದೆ : ಬಹುಮಾನ ವಿತರಣೆ

ಕೊರೋನ ಕಾರಣದಿಂದ ದೀಪಾವಳಿ ಆಚರಣೆಯನ್ನು ಶ್ರೀ ಸುಬ್ರಹ್ಮಣ್ಯ ಸಭಾದ ಸದಸ್ಯರು ವಿಶಿಷ್ಟ ರೀತಿಯಿಂದ ಅಂದರೆ ಅವರವರ ತಮ್ಮ ಮನೆಗಳಲ್ಲಿ ಆಚರಿಸಿದರು ಭಾವಚಿತ್ರವನ್ನು ವಾಟ್ಸಪ್ ನಲ್ಲಿ ಕಳುಹಿಸುವ ಮುಖಾಂತರ ಸ್ಪರ್ಧೆಯನ್ನು ಮಹಿಳಾ ವೇದಿಕೆಯಯವರು ಅಯೋಜಿಸಿದ್ದರು.

ಸ್ಪರ್ಧೆಯಲ್ಲಿ ಬಹುಮಾನಗಳಿಸಿದವರಿಗೆ ಸಭಾದ ಅಧ್ಯಕ್ಷರು ಹರ್ಷ ಕುಮಾರ್ ಕೇದಿಗೆ. ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ್ ಹಾಗೂ ಪದದಾದಿಕಾರಿಯವರು ಬಹುಮಾನ ನೀಡಿ ಶುಭ ಹಾರೈಯಿಸಿದರು.

ವೈಜಯಂತಿಮಾಲಾ ಬೆಳ್ಳೆ. ಶ್ರೀಮತಿ ಕನಕವಲ್ಲಿ ಹರ್ಷ ಕುಮಾರ್ ಕೇದಿಗೆ. ಸುಮಂಗಲಾ ಪ್ರಭಾಕರ್.
ಕುಸುಮಾ ನವೀನ್ ಕುಮಾರ ಮುಂತಾದವರು ಬಹುಮಾನವನ್ನು ಪ್ರಯೋಜಸಿದರು.

Comments are closed.