ಕರಾವಳಿ

ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾಯ್ದೆ ಶೀಘ್ರ ಜಾರಿಯಾಗುತ್ತೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಲವ್ ಜಿಹಾದ್ ಸಾಮಾಜಿಕ ಪಿಡುಗಾಗಿ ಕಾಡುತ್ತಿದ್ದು, ಇಂತಹ ಪ್ರಕರಣದಲ್ಲಿ ಕಾನೂನು ರಚನೆ ಮಾಡುವ ನಿಟ್ಟಿನಲ್ಲಿ ಸರಕಾರ ಸ್ಪಷ್ಟವಾಗಿದ್ದು ಕಾನೂನು ಬಂದೇ ಬರಲಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲವ್ ಜಿಹಾದ್ ವಿಚಾರದಲ್ಲಿ ಕಾನೂನು ತರಲು ಯಾವುದೇ ಗೊಂದಲ ಇಲ್ಲ. ಲವ್ ಜಿಹಾದ್ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ಕಾನೂನು, ಹರ್ಯಾಣದಲ್ಲಿ ವಿಶೇಷ ಸಮಿತಿ, ಮಧ್ಯ ಪ್ರವೇಶದಲ್ಲೂ ಕಠಿಣ ಕಾನೂನು ಚಿಂತನೆಯಿದೆ. ಆ ರಾಜ್ಯಗಳ ಜತೆ ಮಾಹಿತಿ ಪಡೆದು ರಾಜ್ಯದಲ್ಲಿ ಅತೀ ಶೀಘ್ರದಲ್ಲಿ ಲವ್ ಜಿಹಾದ್ ಸಮಗ್ರ ಕಾನೂನು ತರಲಾಗುವುದು ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಗಲ್ ಶಕೆಯಲ್ಲಿ ಬದುಕುತ್ತಿದ್ದಾರೆಂಬುದು ಅವರ ಹೇಳಿಕೆಯಲ್ಲೇ ಅರ್ಥವಾಗುತ್ತೆ ಎಂದರು.

ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ವಿಧಿಸುವ ಕುರಿತು ಇನ್ನೂ ಯಾವುದೇ ಚಿಂತನೆ ನಡೆದಿಲ್ಲ. ಹೊಸ ವರ್ಷಾಚರಣೆ ಸಂದರ್ಭ ಜನದಟ್ಟಣೆ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

Comments are closed.