ಕರಾವಳಿ

ಚರ್ಚ್ ಕಟ್ಟಡ ದುರಸ್ಥಿ ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಸಹಾಯಧನ : ಅರ್ಜಿ ಅಹ್ವಾನ

Pinterest LinkedIn Tumblr

ಮಂಗಳೂರು :ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮದಡಿ ಚರ್ಚ್ ಕಟ್ಟಡದ ದುರಸ್ಥಿ/ ನವೀಕರಣ ಹಾಗೂ ಆವರಣಗೋಡೆ ಮತ್ತು ಸ್ಮಶಾನ ಆವರಣ ಗೋಡೆ ನಿರ್ಮಾಣ/ ಸಮುದಾಯ ಭವನ ನಿರ್ಮಾಣ/ ಅನಾಥಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅನುದಾನ ಘೋಷಣೆಯಾಗಿದ್ದು, ಸಹಾಯಧನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಚರ್ಚ್ ದುರಸ್ಥಿ/ ನವೀಕರಣಕ್ಕಾಗಿ ಕನಿಷ್ಟ ರೂ. 10 ಲಕ್ಷದಿಂದ ಗರಿಷ್ಟ ರೂ. 50 ಲಕ್ಷ ಹಾಗೂ ಸ್ಮಶಾನಗಳಿಗೆ ಮೂಲಭೂತ ಸೌಕರ್ಯಗಳಾದ ಆವರಣ ಗೋಡೆ ನಿರ್ಮಾಣ, ವಿದ್ಯುಥೀಕರಣ. ಶುದ್ದ ಕುಡಿಯುವ ನೀರಿನ ಹಾಗೂ ಕೊಳವೆ ಬಾವಿ ಸೌಕರ್ಯ, ಶವ ಇಡುವ ಕಟ್ಟಡ, ರಸ್ತೆ ಇತ್ಯಾದಿಗಳಿಗೆ ಅಂದಾಜು ವೆಚ್ಚದ ಶೇ.90 ಅಥವಾ ಗರಿಷ್ಟ ರೂ. 25 ಲಕ್ಷದವರೆಗೆ ಯಾವುದು ಕಡಿಮೆಯೋ ಅದರಂತೆ ಹಾಗೂ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿ ತಾಲೂಕು ಕೇಂದ್ರದಲ್ಲಿ ಗರಿಷ್ಠ ರೂ. 50 ಲಕ್ಷ ಹಾಗೂ ಜಿಲ್ಲಾ ಕೇಂದ್ರದಲ್ಲಿ ಗರಿಷ್ಠ ರೂ. 1.00 ಕೋಟಿಯವರೆಗೆ ಹಾಗೂ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳನ್ನು ಪ್ರೋತ್ಸಾಹಿಸುವ ಉದ್ದೇಶದಲ್ಲಿ ಹಾಗೂ ರಾಜ್ಯದಲ್ಲಿರುವ ನಿರ್ಗತಿಕ ವೃದ್ಧರಿಗೆ ಊಟ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸಹಾಯಧನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಿದೆ.

ಅರ್ಜಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಛೇರಿ ಮೌಲಾನಾ ಆಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಅಥವಾ ವೆಬ್‍ಸೈಟ್ (https://dom.karnataka.gov.in) ನಿಂದ ಪಡೆಯುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರು  ತಿಳಿಸಿದ್ದಾರೆ.

Comments are closed.