ಮಂಗಳೂರು / ಉಳ್ಳಾಲ: ಉಳ್ಳಾಲ ತಂಙಳ್ ಎಂದೇ ಪ್ರಸಿಧ್ಧರಾದ, ಅಗ್ರೇಸರ ವಿದ್ವಾಂಸರಾಗಿದ್ದ ಶೈಖುನಾ ತಾಜುಲ್ ಉಲಮಾ ಅಸ್ಸೆಯ್ಯಿದ್ ಅಬ್ದುರ್ರಹ್ಮಾನ್ ಕುಂಞಕೋಯ ತಂಙಳ್ ಅಲ್-ಬುಖಾರಿ ಖ.ಸಿ. ರವರ ಅನರ್ಘ ಸೇವೆಯನ್ನು ಜಗತ್ತಿಗೆ ಪರಿಚಯಿಸುವ ನಿಮಿತ್ತ, ಅವರ ಹೆಸರಿನಲ್ಲಿ ರೂಪಿಕರಿಸಲಾದ ತಾಜುಲ್ಉಲಮಾ.ಕಾಮ್ (tajululama.com) ಜಾಲತಾಣವನ್ನು ತಾಜುಲ್ ಉಲಮಾ ಖ.ಸಿ. ದರ್ಗಾ ಝಿಯಾರತ್ ಬಳಿಕ ಅವರ ಸುಪುತ್ರರೂ, ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಚಾಲನೆಯಿತ್ತರು.
ಈ ಸಂದರ್ಭ ಅಸ್ಸೆಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್-ಹಾದಿ ಉಜಿರೆ, ಹಮೀದ್ ಅಹ್ಸನಿ ಎಟ್ಟಿಕ್ಕುಳಂ, ಯು. ಕೆ. ನಿಝಾಮುದ್ದೀನ್ ಶಾ ಉಪಸ್ಥಿತರಿದ್ದರು.
ಬಳಿಕ ಉಳ್ಳಾಲ ಮೇಲಂಗಡಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆದ ತಾಜುಲ್ ಉಲಮಾ 7ನೇ ವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ.ಕಾಮ್ ಜಾಲತಾಣವನ್ನು ಸೆಯ್ಯಿದ್ ಮದನಿ ಅರಬಿಕ್ ಕಾಲೇಜಿನ ಪ್ರಚಾರ್ಯರಾಗಿದ್ದ ಅಬ್ದರುರ್ರಶೀದ್ ಮದನಿ ಉಸ್ತಾದರು ಲೋಕಾರ್ಪಣೆಗೈದರು.
ತಾಜುಲ್ ಉಲಮಾ ರವರಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಸಂಗ್ರಹಿಸಲು ಸಲುವಾಗಿ ‘ವರ್ಚುವಲ್ ಅಭಿಯಾನ’ವನ್ನು ಸೆಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧ್ಯಕ್ಷರಾದ ಪಿ.ಎಸ್. ಶಿಹಾಬುದ್ದೀನ್ ಸಖಾಫಿ ಚಾಲನೆಗೈದರು. ಸುನ್ನೀ ಯುವಜನ ಸಂಘ ಉಳ್ಳಾಲ ಸೆಂಟರ್ ಗೌರವಾಧ್ಯಕ್ಷರಾದ ಸೆಯ್ಯಿದ್ ಜಲಾಲ್ ತಂಙಳ್ ಅಳೇಕಲ, ಕರ್ನಾಟಕ ಮುಸ್ಲಿಂ ಜಮಾಅತ್ ಉಳ್ಳಾಲ ತಾಲೂಕು ಕೋಶಾಧಿಕಾರಿ ಬಿ.ಜೆ. ಹನೀಫ್ ಹಾಜಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್, ತಾಜುಲ್ ಉಲಮಾ ಉರೂಸ್ ಸಮಿತಿಯ ಜಮಾಲುದ್ದೀನ್ ಮುಸ್ಲಿಯಾರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಹಂಝ ಸುಂದರ್ ಭಾಗ್, ಸುನ್ನೀ ಯುವಜನ ಸಂಘ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಮೇಲಂಗಡಿ, ತಾಜುಲ್ ಉಲಮಾ ಮೆಮೋರಿಯಲ್ ರಿಲೀಫ್ ಸಮಿತಿಯ ಫಾರೂಕ್ ಹಾಜಿ ಮಲಾಝ್, ಹಾಫಿಝ್ ಮುಈನುದ್ದೀನ್ ರಝಾ ಅಮ್ಜದಿ ಮುಸ್ತಫಾ ಮದನಿ, ಅಯ್ಯೂಬ್ ಮಹ್ಳರಿ ಮದನಿ ನಗರ, ಸ್ಯಾಂಡೊಸಾಫ್ಟ್ ಮುಖ್ಯಸ್ಥ ರಿಲ್ವಾನ್ ಶಾ, ಸ್ಟುಡಿಯೋ 17 ತೊಕ್ಕೊಟ್ಟು ಮಾಲಕರಾದ ಮೊಹಮ್ಮದ್ ಸಲ್ಮಾನ್, ಹಾಫಿಝ್ ಉವೈಸ್ ಹಿಶಾಮಿ ಕೊಟೇಪುರ, ಇಸ್ಹಾಕ್ ಹಾಜಿ ಬಸ್ತಿಪಡ್ಪು ಇನ್ನಿತರು ಉಪಸ್ಥಿತರಿದ್ದರು. ಖಾದರ್ ಜೀಲಾನಿ ನಿರೂಪಿಸಿದರು.
Comments are closed.