ಕರ್ನಾಟಕ

ನಾಡಿನ ಜನತೆದೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ/ಬೆಂಗಳೂರು: ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ಬಳಿಗೆ ಮತ್ತಷ್ಟು ಬೆಳಕು ಸಂತೋಷ ನೀಡಲಿ. ಭಗವಂತ ಎಲ್ಲರಿಗೂ ಸಮೃದ್ಧಿ ಹಾಗೂ ಆರೋಗ್ಯ ಕರುಣಿಸಲಿ” ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಸಿಎಂ ಬಿಎಸ್‌‌ವೈ ಅವರು ಕೂಡಾ ಟ್ವೀಟ್‌ ಮೂಲಕ ಶುಭಕೋರಿದ್ದು, ‘ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಸಂತಸ, ಸಂಭ್ರಮಗಳನ್ನು ತರಲಿ. ಕೊರೋನಾ ಸೋಂಕಿನ ಬಗ್ಗೆ ಜಾಗ್ರತೆ ವಹಿಸಿ ಹಬ್ಬವನ್ನು ಆಚರಿಸಿ. ಆರೋಗ್ಯದ ಕಡೆಗೆ ವಿಶೇಷ ಕಾಳಜಿಯಿರಲಿ. ಸಾಂಕ್ರಾಮಿಕದ ಅಂಧಕಾರ ಬೇಗನೆ ಕಳೆದು ಆರೋಗ್ಯಪೂರ್ಣ ಹೊಂಬೆಳಕು ಬೇಗನೆ ಮೂಡಲಿ’ ಎಂದಿದ್ದಾರೆ.

Comments are closed.