ಮೈಸೂರು: ರಾತ್ರಿ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಜೀಪು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸರು ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕಿನಲ್ಲಿ ತಡರಾತ್ರಿ ನಡೆದಿದೆ. ಮೃತರು ಕೆ.ಆರ್ ನಗರ ಪೊಲೀಸ್ ಠಾಣೆಯ ಎಎಸ್ಐ ಮೂರ್ತಿ ಮತ್ತು ಎಸ್ಬಿ (ಗುಪ್ತ ವಾರ್ತೆ) ಮುಖ್ಯ ಪೇದೆ ಶಾಂತಕುಮಾರ್.
ಈ ಇಬ್ಬರು ಪೊಲೀಸರು ಬುಧವಾರ ರಾತ್ರಿ ಜೀಪ್ನಲ್ಲಿ ಸರ್ಕಲ್ ನೈಟ್ ರೌಂಡ್ ಕರ್ತವ್ಯ ಮಾಡುತ್ತಿದ್ದು ಬೆಳ್ಳಗಿನ ಜಾವ ಮೂರು ಗಂಟೆ ಸುಮಾರಿಗೆ ಅವರಿದ್ದ ಜೀಪ್ ನಿಯಂತ್ರಣ ತಪ್ಪಿ ಸಿದ್ದನ ಕೊಪ್ಪಲು ಗೇಟ್ ಸಮೀಪ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದು ಇಬ್ಬರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
Comments are closed.