ಕರಾವಳಿ

ಗೋಹತ್ಯಾ ನಿಷೇಧ ಹಾಗೂ ಲವ್ ಜಿಹಾದ್‌ಗೆ ಕಡಿವಾಣಕ್ಕೆ ಆಗ್ರಹ : ಮುಖ್ಯಮಂತ್ರಿಗಳಿಗೆ ಮನವಿ

Pinterest LinkedIn Tumblr

ಮಂಗಳೂರು: ಪ್ರಬಲವಾದ ಗೋಹತ್ಯಾ ನಿಷೇಧ ಕಾನೂನು ಮತ್ತು ಲವ್ ಜಿಹಾದ್ ಗೆ ಕಡಿವಾಣ ಹಾಕಲು ಒತ್ತಾಯಿಸಿ ವಿಶ್ವ ಹಿಂದು ಪರಿಷದ್ ಮುಖಂಡರು ಮಂಗಳೂರಿನಲ್ಲಿ ಮುಖ್ಯಮಂತ್ರಿ ಶ್ರೀ ಯೆಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ವಿಶ್ವ ಹಿಂದು ಪರಿಷದ್ ಪ್ರಾಂತ ಅಧ್ಯಕ್ಷರಾದ ಪ್ರೊ ಎಂಬಿ ಪುರಾಣಿಕ್ ಮತ್ತು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಅವರು ಮುಖ್ಯಮಂತ್ರಿ ಯೆಡಿಯೂರಪ್ಪನವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಶೀಘ್ರವಾಗಿ ಪ್ರಭಲವಾದ ಗೋಹತ್ಯಾ ನಿಷೇಧ ಕಾನೂನು ಜ್ಯಾರಿ ಮಾಡಬೇಕು ಹಾಗೂ ಲವ್ ಜಿಹಾದ್‌ಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು, ಈ ಸಂಧರ್ಭದಲ್ಲಿ ಪಕ್ಷದ ಮತ್ತಿತರ ಪ್ರಮುಖರು ಜೊತೆಗಿದ್ದರು.

Comments are closed.