ಕರಾವಳಿ

ಬ್ಯಾಂಕ್ ಆಫ್ ಬರೋಡಾ, ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ

Pinterest LinkedIn Tumblr

ಮಂಗಳೂರು : ಬ್ಯಾಂಕ್ ಆಫ್ ಬರೋಡಾ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಬ್ಯಾಂಕ್‌ನ ಪ್ರಾದೇಶಕ ಕಚೇರಿ ಆವರಣದಲ್ಲಿ ನ.3, ಸೋಮವಾರದಂದು ನಡೆಯಿತು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಕಾರಿ ಡಾ. ರಾಜೇಂದ್ರ ಕೆ. ವಿ. ಉದ್ಘಾಟಿಸಿ, ಶುಭಕೋರಿದರು. ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ವಲಯ ಮುಖ್ಯಸ್ಥರಾದ ಸುಜಯಾ ಯು. ಶೆಟ್ಟಿ, ಡೆಪ್ಯುಟಿ ವಲಯ ಮುಖ್ಯಸ್ಥರಾದ ಇ‌ಎಸ್‌ಎಸ್ ಆರ್ ರಾಮಚಂದರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚೇರ್‍ಮನ್ ಸಿ‌ಎ ಶಾಂತರಾಮ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಶರ್ಮಾ, ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ಉಪಸಮಿತಿಯ ಅಧ್ಯಕ್ಷ ಡಾ. ಯು. ವಿ. ಶೆಣೈ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಜಿಲ್ಲಾಕಾರಿ ಡಾ. ರಾಜೇಂದ್ರ ಅವರು ರೆಡ್‌ಕ್ರಾಸ್ ಸದಸ್ಯರ ನೋಂದಾಣಿ ಅಭಿಯಾನಕ್ಕೆ ಮತ್ತು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಡಿಜಿಟಲ್ ಬೋರ್ಡ್‌ಗಳಿಗೆ ಚಾಲನೆ ನೀಡಿದರು.

Comments are closed.