ಪ್ಯಾರಿಸ್: ಫ್ರಾನ್ಸ್ನ ನೈಸ್ನಲ್ಲಿರುವ ಚರ್ಚ್ನಲ್ಲಿ ಇಂದು ದುಷ್ಕರ್ಮಿಗಳು ದಾಳಿ ನಡೆಸಿ, ಮೂವರ ನ್ನು ಹತ್ಯೆ ಮಾಡಿದ್ದಾರೆ. ಅವರಲ್ಲಿ ಒಬ್ಬ ಮಹಿಳೆಯ ತಲೆಯನ್ನು ಕತ್ತರಿಸಿದ್ದಾರೆ.
ನಗರದ ನೊಟ್ರೆ ಡೇಮ್ ಚರ್ಚ್ನಲ್ಲಿ ಈ ಘಟನೆ ನಡೆದಿದೆ. ಫ್ರೆಂಚ್ನ ನೈಸ್ ನಗರದ ಚರ್ಚ್ವೊಂದರಲ್ಲಿ ದಾಳಿಕೋರನ ಚೂರಿ ದಾಳಿಗೆ ಕನಿಷ್ಠ ಮೂವರು ಮೃತಪಟ್ಟಿದ್ದು. ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ.
ಇದು ಜನರಲ್ಲಿ ಭೀತಿ ಹುಟ್ಟಿಸಲು ಭಯೋತ್ಪಾದಕರು ನಡೆಸಿರುವ ಕೃತ್ಯ ಎಂದು ಮೇಯರ್ ಕ್ರಿಸ್ಟಿಯನ್ ಎಸ್ಟ್ರೋಸಿ ಹೇಳಿದ್ದಾರೆ. ಇಂದು ಬೆಳಗ್ಗೆ ಚರ್ಚ್ಗೆ ನುಗ್ಗಿದ ಗುಂಪೊಂದು ದಾಳಿ ನಡೆಸಿತ್ತು. ಅವರಲ್ಲಿ ಒಬ್ಬ ಚಾಕುವಿನಿಂದ ಮಹಿಳೆಯ ತಲೆ ಕತ್ತರಿಸಿದ್ದ. ಬಳಿಕ ಚರ್ಚ್ನ ಇನ್ನಿಬ್ಬರನ್ನು ಕೂಡ ಕೊಲೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ರನ್ನು ನಿಂದಿಸಿದ್ದರು ಎಂಬ ಕಾರಣಕ್ಕೆ ಶಿಕ್ಷಕನೋರ್ವನ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಫ್ರಾನ್ಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು. ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ವಾಕ್ ಸ್ವಾತಂತ್ರ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಭೋದನೆ ಮಾಡುತ್ತಿದ್ದರು. ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಚಿತ್ರದ ಬಗ್ಗೆ ಚರ್ಚೆ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಯುವಕನೋರ್ವ ಶಿಕ್ಷಕನ ಕತ್ತು ಕತ್ತರಿಸಿ ಕೊಂದು ಹಾಕಿದ್ದ. ನಂತರ ಪೊಲೀಸರು ಹಂತಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಇದರ ಬೆನ್ನಲ್ಲೇ ಇದೀಗ ಮೆಡಿಟರೇನಿಯನ್ ಸಿಟಿ ಬಳಿಯ ಚರ್ಚ್ ಬಳಿ ಆಗಂತುಕನೊಬ್ಬ ಚೂರಿಯಿಂದ ಹಲವರ ಮೇಲೆ ದಾಳಿ ನಡೆಸಿದ್ದಾನೆ. ಮಹಿಳೆಯ ಶಿರಚ್ಛೇಧ ಮಾಡಿದ್ದಾನೆ. ಇನ್ನಿಬ್ಬರು ಚೂರಿ ಇರಿತದಿಂದ ಮೃತಪಟ್ಟಿದ್ದಾರೆ. ದಾಳಿಯ ಕುರಿತಂತೆ ಫ್ರೆಂಚ್ ಭಯೋತ್ಪಾದನೆ ವಿರೋಧಿ ಅಭಿಯೋಜಕರರು ತನಿಖೆ ಕೈಗೊಂಡಿದ್ದಾರೆ.
ಚರ್ಚ್ನಲ್ಲಿ ದಾಳಿ ಮಾಡಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮೇಯರ್ ಕ್ರಿಸ್ಟಿಯನ್ ಎಸ್ಟ್ರೋಸಿ ಹೇಳಿದ್ದಾರೆ.
ಈ ಘಟನೆ ಒಂದು ಭಯೋತ್ಪಾದನೆ ಕೃತ್ಯ ಎಂದು ನೈಸ್ ಮೇಯರ್ ಕ್ರಿಸ್ಟಿಯನ್ ಎಸ್ಟ್ರೋಸಿ ಹೇಳಿದ್ದಾರೆ. ನೊಟ್ರೆ ಡೇಮ್ ಚರ್ಚ್ ಬಳಿ ಗುರುವಾರ ಬೆಳಿಗ್ಗೆ ನಡೆದ ದಾಳಿಯ ನಂತರ ಹಲ್ಲೆಕೋರನನ್ನು ಬಂಧಿಸಲಾಗಿದೆ. ಬಂಧನದ ವೇಳೆ ಹಲ್ಲೆಕೋರ ಗಾಯಗೊಂಡಿದ್ದರಿಂದ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿ ಕುರಿತು ತನಿಖೆ ನಡೆಸುವಂತೆ ಫ್ರಾನ್ಸ್ ಭಯೋತ್ಪಾದಕ ನಿಗ್ರಹ ಪ್ರಾಸಿಕ್ಯೂಟರ್ ಡಿಪಾರ್ಟ್ ಮೆಂಟ್ ತಿಳಿಸಿದೆ. ಚರ್ಚ್ ಸುತ್ತಮುತ್ತ ಅತ್ಯಾಧುನಿಕ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.ಘ ಟನೆ ಸಂಬಂಧ ಭಯೋತ್ಪಾದನೆಯ ನಂಟಿನ ಕುರಿತಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Comments are closed.