ಕರಾವಳಿ

ಒಂದೇ ಕುಣಿಕೆಗೆ ನೇ”ಣು ಬಿ’ಗಿದು ಯುವಜೋಡಿ ಆ”ತ್ಮಹ”ತ್ಯೆ : ಪ್ರೀತಿಗೆ ಪೋಷಕರ ವಿರೋಧ ಶಂಕೆ?

Pinterest LinkedIn Tumblr

ಮಂಗಳೂರು, ಅಕ್ಟೋಬರ್ 20: ಯುವಜೋಡಿಯೊಂದು ಆ”ತ್ಮಹ”ತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಸುಳ್ಯದ ವಸತಿ ಗೃಹವೊಂದರಲ್ಲಿ ನಡೆದಿದೆ.

ಆ”ತ್ಮಹ”ತ್ಯೆ ಮಾಡಿಕೊಂಡವರನ್ನು ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್(19) ಮತ್ತು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಕಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ(19) ಎಂದು ಹೆಸರಿಸಲಾಗಿದೆ.

ಮನೆಯವರು ತಮ್ಮ ಪ್ರೀತಿಯನ್ನು ನಿರಾಕರಿಸಿದರು ಎಂಬ ಕಾರಣಕ್ಕೆ ಈ ಯುವಕ ಮತ್ತು ಯುವತಿ ನೇ”ಣು ಬಿಗಿದು ಆ”ತ್ಮಹ”ತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇವರಿಬ್ಬರೂ ಅ. 18 ರಂದು ರಾತ್ರಿ ಸುಳ್ಯದ ವಸತಿಗೃಹಕ್ಕೆ ಬಂದು ಸಂಬಂಧಿಕರು ಎಂದು ಹೇಳಿ ಊರಿಗೆ ಹೋಗಲು ಬಸ್ಸು ಇಲ್ಲ ಎಂದು ಹೇಳಿ ವಸತಿ ಗೃಹದಲ್ಲಿ ರೂಂ ಪಡೆದುಕೊಂಡಿದ್ದರು.ನಿನ್ನೆ ವಸತಿ ಗ್ರಹದ ಸಿಬ್ಬಂದಿ ಕಿಟಕಿಯ ಮೂಲಕ ನೋಡಿದಾಗ ಇಬ್ಬರೂ ಆ”ತ್ಮಹ”ತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇಬ್ಬರು ಒಂದೇ ನೇ”ಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ.

ಯುವಕ ದರ್ಶನ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ಕೋರೋನ ಬರುವ ಮೊದಲು ಇದೇ ವಸತಿಗೃಹದಲ್ಲಿರುವ ಹೋಟೆಲ್‍ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿಕೊಂಡಿದ್ದ. ಮನೆಯಲ್ಲಿ, ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದ.

ನಿನ್ನೆಯ ದಿನ ತಾಯಿ ಇಂದುಮತಿಯವರು ದರ್ಶನ್‍ಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೇ ಯುವಕನ ತಾಯಿ ಯುವತಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಯುವತಿ ಸ್ನೇಹಿತರ ಜೊತೆಗೆ ಹೋಗಿದ್ದಾನೆ ಎಂದು ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ.

ಇದೀಗ ನೇ”ಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃ”ತದೇ’ಹಗಳು ಪತ್ತೆಯಾಗಿದ್ದು, ಆ”ತ್ಮಹ’ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ವಸತಿ ಗೃಹದವರು ಪೊ”ಲೀಸರಿಗೆ ದೂ’ರು ನೀಡಿದ್ದು, ಸುಳ್ಯ ಪೊ”ಲೀಸರು ಪರಿಶೀಲನೆ ನಡೆಸಿ, ಪ್ರ”ಕರ’ಣ ದಾಖಲಿಸಿಕೊಂಡಿದ್ದಾರೆ.

Comments are closed.