ಕರಾವಳಿ

ಹಿರಿಯ ರಂಗಭೂಮಿ ನಟ, ನಿರ್ದೇಶಕ, ಶ್ರೀ ಭಗವತೀ ಕ್ಷೇತ್ರದ ಮೊಕ್ತೇಸರ ಶ್ರೀ ಮಾಧವ ಜೆಪ್ಪು ಪಟ್ನ ವಿಧಿವಶ

Pinterest LinkedIn Tumblr

ಮಂಗಳೂರು, ಅಕ್ಟೊಬರ್.15: ತುಳು ರಂಗ ಭೂಮಿಯ ಹಿರಿಯ ನಟ, ನಿರ್ದೇಶಕ, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮೊಕ್ತೇಸರರಾದ ಶ್ರೀ ಮಾಧವ ಜೆಪ್ಪು ಪಟ್ನ ರವರು ಇಂದು (ಗುರುವಾರ) ಬೆಳಗ್ಗೆ ದೈವಾಧೀನರಾಗಿರುತ್ತಾರೆ.

ಮೃತರು ಶ್ರೀ ಭಗವತೀ ತೀಯಾ ಸೇವಾ ಸಂಘದ , ನವನಿಧಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಸೇವೆಸಲ್ಲಿಸುತಿದ್ದು , ತುಳು ರಂಗ ಭೂಮಿಯ ಹಿರಿಯ ಕಲಾವಿದರಾಗಿ ಅಸಂಖ್ಯ ಪ್ರತಿಭೆಗಳನ್ನು ಬೆಳಕಿಗೆ ತಂದು ರಾಜ್ಯ ಪ್ರಶಸ್ತಿಯನ್ನೊಳಗೊಂಡಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು , ಬಿರುದುಗಳನ್ನು ಪಡೆದಿದ್ದರು.

ಮೃತರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಇಂದು ಅಪರಾಹ್ನ ನಂದಿ ಗುಡ್ಡೆ ರುದ್ರ ಭೂಮಿಯಲ್ಲಿ ನಡೆಯಿತು.

ಅವರ ಅಗಲಿಕೆ , ಕಲಾ ಕ್ಷೇತ್ರ , ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟವಾಗಿದೆ. ಸರ್ವರರೊಂದಿಗೆ ಆತ್ಮೀಯ ಒಡನಾಟಹೊಂದಿದ್ದ ಶ್ರೀ ಯುತರ ಅಗಲಿದ ದಿವ್ಯಾತ್ಮಕ್ಕೆ ಶ್ರೀ ಭಗವತೀ ಮಾತೆ ಹಾಗೂ ಅವರ ಕರಾರ್ಚಿತ ಸರ್ವ ಶಕ್ತಿಗಳು ಪರಮ ಸಾಯುಜ್ಯವನ್ನು ಕರುಣಿಸಲೆಂದು ಶ್ರೀ ಭಗವತೀ ಕ್ಷೇತ್ರದ ಸರ್ವ ಸದಸ್ಯರು ಹಾಗೂ ಅವರ ಅಪಾರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

Comments are closed.