ಕರಾವಳಿ

ಮಾಧ್ಯಮಗಳ ಮೇಲಿನ ದೌ”ರ್ಜನ್ಯಗಳಿಗೆ ಕಡಿವಾಣ ಹಾಕುವಂತೆ ಕೆಜೆಯು ವತಿಯಿಂದ ಕಮಿಷನರ್ ಮೂಲಕ ಗೃಹ ಸಚಿವರಿಗೆ ಮನವಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್ 01 : ರಾಜ್ಯಮಟ್ಟದ ಕನ್ನಡ ನ್ಯೂಸ್ ಚಾನೆಲ್ ಪವರ್ ಟಿವಿ ಕಛೇರಿಯ ಮೇಲೆ ರಾಜ್ಯ ಸರಕಾರದ ಅಧೀನದಲ್ಲಿರುವ ಬೆಂಗಳೂರು ಸಿಸಿಬಿ ಪೊಲೀಸರ ತಂಡ ದಾ”ಳಿ ನಡೆಸಿ ಸುದ್ದಿ ವಾಹಿನಿಯ ನೇರ ಪ್ರಸಾರ ಸ್ಥಗಿತಗೊಳಿರುವ ಕ್ರಮವನ್ನು (KJU) ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತಿರುವುದಾಗಿ ಕೆಜೆಯು ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ತಿಳಿಸಿದ್ದಾರೆ.

ಇದೇ ವೇಳೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಮಾಧ್ಯಮಗಳ ಮೇಲಾಗುತ್ತಿರುವ ದೌ”ರ್ಜನ್ಯಗಳಿಗೆ ಕಡಿವಾಣ ಹಾಕಬೇಕು ಹಾಗೂ ಅಧಿಕಾರಸ್ಥರಿಂದ ಮಾಧ್ಯಮ ರಂಗವನ್ನು ರಕ್ಷಿಸಿ ಎಂದು ಆಗ್ರಹಿಸಿ ಸಂಘದ ನಿಯೋಗ ಮಂಗಳೂರು ಪೊಲೀಸ್ ಅಯುಕ್ತ ವಿಕಾಸ್ ಕುಮಾರ್ ಅವರ ಮೂಲಕ ರಾಜ್ಯ ಗೃಹ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದೆ.

ಬುಧವಾರ ಸಂಜೆ ಕೆಜೆಯು ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ನೇತೃತ್ವದ ನಿಯೋಗವು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳದ ಪೊ”ಲೀಸರು ದುರುದ್ದೇಶದಿಂದ ವಾಹಿನಿಯ ಕಛೇರಿಯ ಮೇಲೆ ದಾ”ಳಿ ನಡೆಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸುದ್ದಿ ಸಂಸ್ಥೆಯ ಮೇಲೆ ದೌ”ರ್ಜನ್ಯ ನಡೆಸಿರುವುದು ಅತ್ಯಂತ ಕಳವಳಕಾರಿ ಎಂದು ಅಭಿಪ್ರಾಯಪಟ್ಟಿದೆ.

ಜನ ಸಾಮಾನ್ಯರ ಧ್ವನಿಯಾಗಿರುವ ಮಾಧ್ಯಮ ರಂಗದ ಮೇಲೆ ಇತ್ತೀಚೆಗಿನ ದಿನಗಳಲ್ಲಿ ವ್ಯವಸ್ಥಿತ ದಾ”ಳಿಗಳು ಹೆಚ್ಚಾಗುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟು ಮಾಡುತ್ತಿರುವ ಸೂಚಕವೆಂದೇ ಪರಿಗಣಿಸಬೇಕಾಗಿದೆ. ಇದು ಅಪಾಯಕಾರಿಯೂ ಹೌದು. ಕಾನೂನನ್ನು ಮೀರಿ, ಅಧಿಕಾರ ಹಾಗೂ ಆಡಳಿತ ವ್ಯವಸ್ಥೆಯನ್ನು ತೆರೆಮರೆಯಲ್ಲಿ ದುರುಪಯೋಗಪಡಿಸಿಕೊಂಡು ಜನರ ಧ್ವನಿಯಾಗಿರುವ ಮಾಧ್ಯಮ ಸಂಸ್ಥೆಗಳ ಮೇಲೆ ನಡೆಸಲಾಗುತ್ತಿರುವ ದೌ”ರ್ಜನ್ಯವನ್ನು ಹಾಗೂ ಇದಕ್ಕೆ ಕಾರಣರಾದ ಅಧಿಕಾರಿಗಳ ನಡೆಯನ್ನು ನಮ್ಮ ಸಂಘವು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತದೆ ಹಾಗೂ ವಿರೋಧಿಸುತ್ತದೆ.

ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳ ಬಗ್ಗೆ ಆಕ್ಷೇಪಗಳಿದ್ದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಅವಕಾಶಗಳಿದ್ದರೂ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿರುವುದು ಇಲ್ಲಿ ಕಂಡು ಬರುತ್ತಿರುವ ನಗ್ನ ಸತ್ಯ. ಇಲ್ಲಿ ಯಾರೂ ಪರಿಪೂರ್ಣರಲ್ಲ. ತಪ್ಪು-ಒಪ್ಪುಗಳ ಬಗ್ಗೆ ತೀರ್ಮಾನಿಸಲು ಕಾನೂನು ವ್ಯವಸ್ಥೆಗಳಿವೆ, ನ್ಯಾಯಾಲಯಗಳಿವೆ, ಅಲ್ಲಿನ ತೀರ್ಮಾನಗಳಿಗೆ ಬದ್ದರಾಗಬೇಕಿದೆ. ರಾಜ್ಯ ಗೃಹ ಸಚಿವರು ಈ ಬಗ್ಗೆ ಮಧ್ಯ ಪ್ರವೇಶಿಸಿ ದೌ”ರ್ಜನ್ಯಕ್ಕೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಜರುಗಿಸುವ ಮೂಲಕ ಅಧಿಕಾರ ದುರುಪಯೋಗವನ್ನು ತಡೆಯಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭ ಸಂಘದ ಪದಾಧಿಕಾರಿಗಳಾದ ದತ್ತಾತ್ರೇಯ ಹೆಗಡೆ, ಇಜಾಝ್ ಬಡ್ಡೂರು, ಸದಾನಂದ ಸುವರ್ಣ, ಬಾಲಕೃಷ್ಣ ಕಲ್ಲಡ್ಕ , ಲತೀಫ್ ನೇರಳಕಟ್ಟೆ, ಪಿ.ಎಂ.ಎ ಅಶ್ರಫ್, ಮಸ್ತಫಾ, ಪಾಣೆಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

Comments are closed.