ಅಂತರಾಷ್ಟ್ರೀಯ

‘ಕಮಲ’ಕ್ಕೆ ಜೈ ಎಂದ ಅಣ್ಣಾಮಲೈಗೆ ಬಿಜೆಪಿಯ ಬಿಗ್ ಗಿಪ್ಟ್: ತಮಿಳುನಾಡು ರಾಜ್ಯ ಭಾ.ಜ.ಪಾ. ಉಪಾಧ್ಯಕ್ಷ ಗಾದಿ..!

Pinterest LinkedIn Tumblr

ತಮಿಳುನಾಡು: ಆಗಸ್ಟ್‌ 25 ರಂದು ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಸದ್ಯ ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಕರ್ನಾಟಕದಲ್ಲಿ ಮೊದಲಿಗೆ ಉಡುಪಿ, ಚಿಕ್ಕಮಗಳೂರು ಎಸ್ಪಿ ಆಗಿ ಬಳಿಕ ಬೆಂಗಳೂರು ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದ ಅಣ್ಣಾಮಲೈ ದಕ್ಷ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದರು.

ಮೊನ್ನೆಯಷ್ಟೆ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿ ರಾಷ್ಟ್ರೀಯತೆ ಬಗ್ಗೆ ಮಾತನಾಡುವ ಮೂಲಕ ಕರ್ನಾಟಕದ ಸಿಗಂ ಮತ್ತಷ್ಟು ಅಭಿಮಾನಿಗಳ ಓಲೈಸಿಕೊಂಡಿದ್ದರು. ಮುಂದಿನ ಬೆಳವಣಿಗೆಯಲ್ಲಿ ಅಣ್ಣಾಮಲೈ ವಿರುದ್ಧ ಠಾಣೆಯೊಂದರಲ್ಲಿ ಪ್ರಕರಣವೊಂದು ದಾಖಲಾಗಿತ್ತು.

ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಕೆ. ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ಉಪಾಧ್ಯಕ್ಷ ಗಾದಿ ಏರಿದ್ದು ರಾಜಕೀಯವಾಗಿ ಇದೊಂದು ಮಹತ್ತರ ತಿರುವು ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Comments are closed.