ಕರಾವಳಿ

ಅಯೋಧ್ಯೆಯಲ್ಲಿ ಭೂಮಿ ಪೂಜೆ ಹಿನ್ನೆಲೆ : ಮಂಗಳೂರಿನ ವಿವಿಧೆಡೆಗಳಲ್ಲಿ ಬಲೂನ್ ಹಾರಿಸಿ ಸಂಭ್ರಮಾಚರಣೆ

Pinterest LinkedIn Tumblr

ಮಂಗಳೂರು, ಆಗಸ್ಟ್. 05 : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜೆ ಸಂದರ್ಭ ಇಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇಗುಲಕ್ಕೆ ಶಿಲಾನ್ಯಾಸ ನಡೆಸುತ್ತಿರುವ ಐತಿಹಾಸಿಕ ಕ್ಷಣದ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಮುಖಂಡರ ನೇತ್ರತ್ವದಲ್ಲಿ ಮಂಗಳೂರಿನ ವಿವಿಧೆಡೆಗಳಲ್ಲಿ ಬಲೂನ್ ಹಾರಿಸಿ ಸಂಭ್ರಮಾಚರಿಸಲಾಯಿತು.

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕುಸ್ಥಾಪನೆಯ ಪ್ರಯುಕ್ತ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂದಿರದ ಶಿಲಾನ್ಯಾಸ ನೆರವೇರಿಸುವ ಶುಭ ಸಂದರ್ಭದಲ್ಲಿ ನಗರದ ವಿವಿಧೆಡೆಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದೊಂದಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಜಾರಿಗೊಳಿಸಿರುವ ಸೆಕ್ಷನ್ 144 ಗಣನೆಗೆ ತೆಗೆದುಕೊಂಡು ಏಕ ಕಾಲಕ್ಕೆ ಮುಹೂರ್ತದ ಸಮಯದಲ್ಲಿ ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗ, ನಗರದ ಪಂಪ್ ವೆಲ್ ಸರ್ಕಲ್, ಮಂಗಳಾದೇವಿ ಸರ್ಕಲ್, ಬಿಕರ್ನಕಟ್ಟೆ ಸರ್ಕಲ್, ಉರ್ವಸ್ಟೋರ್ ಜಂಕ್ಷನ್ ಸೇರಿದಂತೆ ಹಲವಾರು ಕಡೆಗಳಲ್ಲಿ ಶ್ರೀರಾಮ್‌‌ ಧ್ವಜದೊಂದಿಗೆ ಬಲೂನ್ ಹಾರಿಸಿ ಸಂಭ್ರಮಾಚರಿಸಲಾಯಿತು.

__ ಸತೀಶ್ ಕಾಪಿಕಾಡ್

Comments are closed.