ಮಂಗಳೂರು : ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕಾಸರಗೋಡು ಜಿಲ್ಲಾ ಗಡಿಭಾಗ ದಿಂದ ಸಂಚರಿಸುವ ನಿವಾಸಿಗಳಿಗೆ, ವೃತ್ತಿಪರರಿಗೆ, ವಿದ್ಯಾರ್ಥಿಗಳಿಗೆ, ಮತ್ತು ಇತರ ಕಾರ್ಮಿಕರಿಗೆ, ದಿನ ನಿತ್ಯದ ಅಂತರ್ ರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ಇ-ಪಾಸ್ ವ್ಯವಸ್ಥೆಯನ್ನು ಸಹಾಯಕ ಆಯುಕ್ತರ ಕಚೇರಿ, ಮಂಗಳೂರು ಉಪವಿಭಾಗ ಇಲ್ಲಿ ವಿತರಿಸಲಾಗಿರುತ್ತದೆ.
ಗಡಿಭಾದಿಂದ ವಿವಿಧ ಕಾರಣಗಳಿಗೆ ತಲಪಾಡಿ ಚೆಕ್ಪೋಸ್ಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವವರು ಕಡ್ಡಾಯವಾಗಿ ಇ-ಪಾಸ್ನ್ನು ಹೊಂದಿರಬೇಕು.
ಮೊದಲು ನೀಡಲಾಗಿರುವ ಇ-ಪಾಸ್ ಅವಧಿಯು ಮುಕ್ತಾಯಗೊಳ್ಳಲಿರುವುದರಿಂದ ಇ-ಪಾಸ್ ದಿನಾಂಕವನ್ನು ಜುಲೈ 4 ರವರೆಗೆ ವಿಸ್ತರಿಸಲಾಗಿದೆ.
ಪಾಸ್ಗಳ ನವೀಕರಣಕ್ಕಾಗಿ ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರ ಪ್ರಕಟಣೆ ತಿಳಿಸಿದೆ.
Comments are closed.