ಕರಾವಳಿ

ನಾಳೆ ಮಂಗಳೂರಿನಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಗಾರ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಮೇ 28 : ಜಿಲ್ಲಾ ಗೃಹರಕ್ಷಕ ದಳ, ಜಿಲ್ಲಾ ಪೌರರಕ್ಷಣಾ ಪಡೆ ದ.ಕ. ಜಿಲ್ಲೆ ಮತ್ತು ಪೇಮ್ ಅಡ್ವೆಂಚರ್ ಅಕಾಡೆಮಿ ಇದರ ಜಂಟಿ ಆಶ್ರಯದಲ್ಲಿ ಹೊಸದಾಗಿ ನೊಂದಣಿಯಾದ ಪೌರರಕ್ಷಣಾ ತಂಡದ ಕಾರ್ಯಕರ್ತರಿಗೆ ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಮತ್ತು ಕಾರ್ಯಾಗಾರ ಮೇ 29 ರಂದು ಬೆಳಿಗ್ಗೆ 9 ರಿಂದ 1 ಗಂಟೆ ವರೆಗೆ ಜಿಲ್ಲಾ ಗೃಹರಕ್ಷಕದಳ ಕಚೇರಿ ಮೇರಿಹಿಲ್ ಇಲ್ಲಿ ನಡೆಯಲಿದೆ.

ಪೌರರಕ್ಷಣಾ ತಂಡಕ್ಕೆ ಕಾರ್ಯಕರ್ತರಾಗಿ ನೊಂದಾವಣೆ ಮಾಡಿದ ಎಲ್ಲಾ ಸದಸ್ಯರು ಈ ಶಿಬಿರಕ್ಕೆ ಹಾಜರಾಗಬೇಕು ಎಂದು ಜಿಲ್ಲಾ ಗೃಹರಕ್ಷಕದಳದ ಪ್ರಕಟಣೆ ತಿಳಿಸಿದೆ.

Comments are closed.