ಮಂಗಳೂರು/ ಮೂಲ್ಕಿ : ಅಬುಧಾಬಿಯಲ್ಲಿ ಉದ್ಯೋಗ ಹೊಂದಿದ್ದ ಹೆಜಮಾಡಿ ನಿವಾಸಿ 44ರ ಹರೆಯದ ವ್ಯಕ್ತಿ ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಜಮಾಡಿ ಬ್ರಹ್ಮ ಸ್ಥಾನ ಸಮೀಪದ ನಿವಾಸಿ ಕಳೆದ 8 ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಎರಡು ಬಾರಿ ಗಂಟಲು ಸ್ರಾವ ಪರೀಕ್ಷೆ ನಡೆಸಿದ್ದು ನೆಗೆಟಿವ್ ವರದಿ ಬಂದಿತ್ತು.
ಮೂರನೇ ಬಾರಿ ಪಾಸಿಟಿವ್ ಬಂದಿದ್ದು ಶೇಖ್ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರ ಅಂತ್ಯಸಂಸ್ಕಾರ ಅಲ್ಲಿಯೇ ನೆರವೇರಿದೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Comments are closed.