ಕರಾವಳಿ

ದುಬಾಯಿಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ಅವರಿಂದ ಕುತೂಹಲ ಭರಿತ ಸಸ್ಪೆನ್ಸ್ ಚಿತ್ರ ” ಅವಳ ಹೆಜ್ಜೆ” ಯ ಹಾಡು ನಿಮಗಾಗಿ…

Pinterest LinkedIn Tumblr

ಸಂಗೀತಾ ಪ್ರೇಮಿಗಳಿಗಾಗಿ ದುಬಾಯಿಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ಅವರ ವಿನೂತನ ಪ್ರಯತ್ನ

ಮಂಗಳೂರು, ಮೇ.24: ಕೊರೋನಾ ಸೋಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ನಮಗೆ ಕೆಲವೊಂದು ಎಂಟ್ರಟೈನ್ ಮೆಂಟ್ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಮೊಬೈಲ್ ನಲ್ಲಿ ನಮ್ಮವರೇ ಹಾಡುವ ನಮಗೆ ಇಷ್ಟವಾದ ಸುಮಧುರ ಹಾಡುಗಳನ್ನು ಕೇಳುವ ಭಾಗ್ಯ ಲಭಿಸಿದರೆ…

ನಾವು ರೇಡಿಯೋ ಹಾಗೂ ಟಿವಿ ಮೂಲಕಚಲನ ಚಿತ್ರದ ಹಾಡು ಕೇಳಿ ಅನಂದಿಸ ಬಹುದು. ಆದರೆ ನಮ್ಮವರೆ ನಮ್ಮ ಕಣ್ಣ ಮುಂದೆ ಬಂದು ಲೈವ್ ಆಗಿ ಹಾಡುತ್ತಿದ್ದರೆ… ಹೌದು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಗೀತಾ ಪ್ರೇಮಿಗಳ ಬೇಸರ ಕಳೆಯಲು ಯುಟ್ಯುಬ್ ಮೂಲಕ ಸುಮಧುರ ಹಾಡುಗಳನ್ನು ಹಾಡುವ ಮೂಲಕ ಸಂಗೀತಾ ಪ್ರೇಮಿಗಳಿಗೆ ಸಂಗಿತದ ರಸದೌತಣ ನೀಡುತ್ತಿದ್ದಾರೆ ದುಬಾಯಿಯ ಖ್ಯಾತ ಉದ್ಯಮಿ, ಆಕ್ಮೆ ಸಂಸ್ಥೆಯ ಆಡಳಿತ ನಿರ್ದೇಶಕ, ಕನ್ನಡ-ತುಳು ಚಲನ ಚಿತ್ರ ನಿರ್ಮಾಪಕ ಹಾಗೂ ಖ್ಯಾತ ಹಾಡುಗಾರರು ಆಗಿರುವ ನಮ್ಮ ಮಂಗಳೂರಿನವರೇ ಆಗಿರುವ ಶ್ರೀ ಹರೀಶ್ ಶೇರಿಗಾರ್ ಅವರು. ಇಂದು ಪ್ರಸಿದ್ಧ ನಟ ದಿ. ವಿಷ್ಣುವರ್ಧನ್ ಹಾಗೂ ತನ್ನ ಅದ್ಭುತ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಬಹುಭಾಷ ನಟಿ ಲಕ್ಷ್ಮೀ ಯಾನೆ ಜೂಲಿ ಲಕ್ಷ್ಮೀ ನಟಿಸಿರುವ ಕುತೂಹಲ ಭರಿತ ಸಸ್ಪೆನ್ಸ್ ಚಿತ್ರ ” ಅವಳ ಹೆಜ್ಜೆ” ಯ “ನೆರಳನ್ನು ಕಾಣದ ಲತೆಯಂತೆ” ಹಾಡನ್ನು ಸುಮಧುರವಾಗಿ ಹಾಡಿದ್ದಾರೆ ನಮ್ಮ ಸಂಗೀತಾ ಪ್ರೇಮಿಗಳಿಗಾಗಿ…

ದುಬಾಯಿಯಲ್ಲಿ ಖ್ಯಾತ ಉದ್ಯಮಿಯಾಗಿದ್ದರೂ ಕನ್ನಡ-ತುಳು ಚಿತ್ರರಂಗದ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿರುವ ಶ್ರೀ ಹರೀಶ್ ಶೇರಿಗಾರ್ ಅವರು ಸಂಗೀತಾದಲ್ಲಿ ಅತೀ ಹೆಚ್ಚು ಆಸಕ್ತಿ ಬೆಳೆಸಿಕೊಂಡು, ಸಂಗೀತಾದ ಬಗ್ಗೆ ಅಪಾರ ಅಭಿಮಾನ-ಗೌರವದಿಂದ ಸಂಗೀತಾ ಪ್ರೇಮಿಗಳಿಗಾಗಿ ಹೆಸರಾಂತ ಕನ್ನಡ ಚಿತ್ರಗಳ ಹಾಡುಗಳನ್ನು ಹಾಡಿದ್ದಾರೆ. ಈ ಹಾಡುಗಳನ್ನು ಕೇಳಿ ನಿಮ್ಮ ಅನಿಸಿಕೆಯನ್ನು ಫೋಸ್ಟ್ ಮಾಡಿ…

Comments are closed.