ಕರಾವಳಿ

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ – ಅಹ್ವಾನ

Pinterest LinkedIn Tumblr

ಮಂಗಳೂರು ಮೇ 18 : ಪ್ರತಿ ವರ್ಷ ಜೂನ್ 5 ರಂದು ‘ವಿಶ್ವ ಪರಿಸರ ದಿನಾಚರಣೆ’ಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು ಘೋಷಿಸಿರುವ ವಿಷಯದ ಕುರಿತಾಗಿ ಎಲ್ಲೆಡೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಬಾರಿಯ ಕೇಂದ್ರ ವಿಷಯ: ‘ಜೀವಿವೈವಿಧ್ಯತೆಯನ್ನು ಆಚರಿಸೋಣ’ (Celebrating Biodiversity). ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಲೇಖನ ಬರೆಯಲು ವಿಷಯಗಳು: ಜೀವಿವೈವಿಧ್ಯತೆಯ ರಕ್ಷಣೆಯಿಂದ ಮಾನವನ ಪ್ರಗತಿ, ಕೊರೋನಾ ವೈರಸ್ ಪಿಡುಗು- ನಿಸರ್ಗ ಹಾಗೂ ಜೀವಿವೈವಿಧ್ಯತೆಗೆ ವರದಾನ, ಪರಿಸರ ಸಮತೋಲನೆಯಲ್ಲಿ ಜೀವಿವೈವಿಧ್ಯತೆಯ ಪಾತ್ರ.

ನಿಬಂಧನೆಗಳು ಚಿತ್ರ ಬರೆಯಲು A3 ( Standard Size) ಹಾಳೆ ಬಳಸುವುದು. ಕ್ರೆಯಾನ್ಸ್, ಬಣ್ಣದ ಪೆನ್ಸಿಲ್, ಬ್ರಷ್ ಈ ಯಾವುದಾದರೂ ಸಾಮಗ್ರಿಗಳನ್ನು ಬಳಸಿ ಚಿತ್ರವನ್ನು ರಚಿಸಬಹುದು. ಲೇಖಕರು ತಮ್ಮ ಹೆಸರು, ವಿಳಾಸ, ಮೊಬೈಲ್/ದೂರವಾಣಿ ಇ-ಮೇಲ್ ಹಾಗೂ ಉದ್ಯೋಗದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು.

ಪ್ರತಿ ವಿಷಯದ ಅತ್ಯುತ್ತಮ ಐದು ಚಿತ್ರಗಳಿಗೆ (6-8, 9-12ನೇ ವರ್ಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕ) ನಗದು ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಒಬ್ಬರು ಒಂದು ವಿಷಯಕ್ಕೆ ಒಂದು ಚಿತ್ರವನ್ನು ಮಾತ್ರ ಬರೆಯಬೇಕು. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು. ಲೇಖನಗಳನ್ನು ಕರಾವಿಪ ಕಚೇರಿಗೆ ಕಳುಹಿಸಲು ಕೊನೆಯ ದಿನ ಮೇ 31. ಲೇಖನಗಳನ್ನು ಕಳುಹಿಸಬೇಕಾದ ಇಮೇಲ್: krvp.info@gmail.com ಅಥವಾ ವಾಟ್ಸ್‍ಅಪ್ ಸಂಖ್ಯೆ: 9483549159.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9008442557/ 9483549159 / 9880917831 ಸಂಪರ್ಕಿಸಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಣೆ ತಿಳಿಸಿದೆ.

Comments are closed.