ಕರಾವಳಿ

ಮಂಗಳೂರಿನ ಅತೀ ಸ್ಮಾರ್ಟ್ ರಸ್ತೆಯ ಕಾಮಗಾರಿ ಪ್ರಾರಂಭ : ಸಾರ್ವಜನಿಕರು ಸಹಕರಿಸುವಂತೆ ಶಾಸಕ ಕಾಮತ್ ಮನವಿ

Pinterest LinkedIn Tumblr

ಮಂಗಳೂರು: ‘ ಸ್ಮಾರ್ಟ್ ಸಿಟಿ ಅಂಗವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವ ದಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆ ಬಹಳ ವಿನೂತನ ರೀತಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, 12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ರಸ್ತೆ ಸರಿ ಸುಮಾರು 800 ಮೀಟರ್ ಉದ್ದದ ಇರಲಿದ್ದು ರಸ್ತೆಯಲ್ಲಿ ಇದ್ದಂತಹ ಡ್ರೈನೇಜ್ ಪೈಪ್ ಗಳು,ನೀರಿನ ಪೈಪ್ ಗಳು, ಮೇಲ್ಭಾಗದಲ್ಲಿರುವ ವಿದ್ಯುತ್ ತಂತಿಗಳು ಇವೆಲ್ಲವನ್ನು ರಸ್ತೆಯ ಒಂದೇ ಕಡೆಯಲ್ಲಿ ಅಳವಡಿಸಿ ಅಂಡರ್ ಗ್ರೌಂಡ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಈ ರಸ್ತೆಯನ್ನು ಈಸ್ಟ್, ವೆಸ್ಟ್ ಮತ್ತು ಮಿಡಲ್ ಜ್ಹೋನ್ ಎಂದು ಮೂರು ವಿಭಾಗ ಮಾಡಲಾಗಿದೆ. ಈಸ್ಟ್ ಜ್ಹೋನ್ ಅಂದ್ರೆ ಕದ್ರಿ ಪೋಲಿಸ್ ಸ್ಟೇಶನ್ ನಿಂದ ಆಕಾಶವಾಣಿ ತನಕ ಹೋಗಿ ವಾಹನಗಳುಬಯೂ ಟರ್ನ್ ಹಾಕಿ ಬರಬೇಕು.ಅದೇ ರೀತಿ ವೆಸ್ಟ್ ಜ್ಹೋನ್ ಪದವು ಹೈಸ್ಕೂಲ್ ಪ್ರಾರಂಭದಿಂದ ಗೋರಕ್ಷನಾಥ ಹಾಲ್ ತನಕ ಯೂ ಟರ್ನ್ ಹಾಕಿ ವಾಹನಗಳು ಸಾಗಬೇಕು.ಅದರ ಮಿಡಲ್ ಜ್ಹೋನ್ ನಲ್ಲಿ ಯಾವುದೇ ವಾಹನ ಚಲಿಸುವಂತಿಲ್ಲ.ಅಲ್ಲಿ ಮಕ್ಕಳಿಗೆ ಆಟ ಆಡುವ ವ್ಯವಸ್ಥೆ ಸೇರಿದಂತೆ, ವಾಕಿಂಗ್ ಟ್ರ್ಯಾಕ್, ಕಾರಂಜಿಗಳು ಹೀಗೆ ಎಲ್ಲರಿಗೂ ಸಮಯವನ್ನು ಕಳೆಯಲು ವಿಶೇಷ ರೀತಿಯ ಅವಕಾಶ ಮಾಡಿ ಕೊಡಲಾಗುವುದು. ಕೆಲವರ ಸಲಹೆಯಂತೆ ಹಲವು ಸೌಲಭ್ಯದೊಂದಿಗೆ ಸೈಕಲ್ ಟ್ರ್ಯಾಕ್ ಕೂಡ ನಿರ್ಮಾಣ ಮಾಡಬೇಕೆಂದು ಶಾಸಕ ಕಾಮತ್ ಅಧಿಕಾರಿಗಳಿಗೆ ಆದೇಶ ನೀಡಿದರು.

ಈ ಪರಿಸರದಲ್ಲಿರುವ ಅಂಗಡಿ ಮಂಗಟ್ಟು ಇರುವವರಲ್ಲಿ ಈ ಬಗ್ಗೆ ಮಾತನಾಡಿ ಅವರಿಗೂ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಇಲ್ಲಿರುವ ಯಾವುದೇ ಮರಗಳನ್ನು ಕಡಿಯದೇ ಬಹಳ ವಿನೂತನ ರೀತಿಯಲ್ಲಿ ಅಧಿಕಾರಿಗಳು ಈ ರಸ್ತೆ ನಿರ್ಮಿಸಲಿದ್ದಾರೆ. ಈ ಎಲ್ಲಾ ಕಾಮಗಾರಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕ ಕಾಮತ್ ಕೇಳಿಕೊಂಡರು.

ಈ ಸಂಧರ್ಭದಲ್ಲಿ ಮೇಯರ್ ಅವರಾದ ದಿವಾಕರ್, ಉಪ ಮೇಯರ್ ವೇದಾವತಿಯವರು, ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶರತ್ ಕುಮಾರ್, ಕಿರಣ್ ಕುಮಾರ್,ಶ್ರೀಮತಿ ಪೂರ್ಣಿಮಾ, ಜಗದೀಶ್ ಶೆಟ್ಟಿ ಹಾಗೂ ಆ ಭಾಗದ ಮನಪಾ ಸದಸ್ಯರಾದ ಶಕೀಲಾ ಕಾವ ಮನೋಹರ ಕದ್ರಿ, ಸುಧೀರ್ ಶೆಟ್ಟಿ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು.

ಸ್ಮಾರ್ಟ್ ಸಿಟಿ ಎಂ.ಡಿ ನಜ್ಹೀರ್, ಅಧಿಕಾರಿಗಳಾದ ಲಿಂಗೇ ಗೌಡ ಅವರು, ರವಿಕುಮಾರ್, ಈ ರಸ್ತೆಯ ಪ್ಲಾನ್ ಮಾಡಿದ ಆರ್ಕಿಟೆಕ್ಟ್ ವೆಂಕಟೇಶ ಪೈ, ಈ ರಸ್ತೆಯ ಕಾಂಟ್ರಾಕ್ಟರ್ ಗಳಾದ ರಾಮಾ ಕಾಮತ್ ಸಂಸ್ಥೆಯವರುೀ ವೇಳೆ ಹಾಜಾರಿದ್ದರು.

Comments are closed.