ಕರಾವಳಿ

ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಿಶಿಷ್ಟ ಶೈಲಿಯ ಸ್ಯಾನಿಟೈಸರ್ ಯಂತ್ರ ವಿತರಣೆ

Pinterest LinkedIn Tumblr

ಮಂಗಳೂರು, ಎಪ್ರಿಲ್.28 : ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಸಮಿತಿ ವತಿಯಿಂದ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಯಾನಿಟೈಸರ್ ಯಂತ್ರ ವಿತರಣೆ ಕಾರ್ಯಕ್ರಮ ಸೋಮವಾರ ಜರಗಿತು.

ಕೈಯಿಂದ ಮುಟ್ಟುವ ಅವಶ್ಯಕತೆ ಇಲ್ಲದೆ, ಕಾಲಿನಿಂದ ಪ್ರೆಸ್ ಮಾಡಿ ಕೈಯನ್ನು ಸ್ಯಾನಿಟೈಸ್ ಮಾಡಬಹುದಾ ಗಿದ್ದು, ಇದರಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಶಾಂತ್, ಬಿಜೆಪಿಯ ಸೇವಾಕಾರ್ಯಕ್ಕೆ ವಂದನೆ ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಸ್ಯಾನಿಟೈಸರ್ ಯಂತ್ರವನ್ನು ಹಸ್ತಾಂತರ ಮಾಡಿ, ಇದು ಪರಂಗಿಪೇಟೆಯ ಅರ್ಜುನ್ ಪೂಂಜಾ ಎಂಬ ಯುವಕ ಮಾಡಿದ ಹೊಸ ಆವಿಷ್ಕಾರ, ಪ್ರಸ್ತುತ ಸಮಾಕ್ಕೆ ಬಹಳ ಉಪಯುಕ್ತ ಎಂದು ತಿಳಿಸಿದರು.

ಜಿ.ಪಂಚಾಯತ್ ಸದಸ್ಯೆ ಶ್ರೀಮತಿ ಧನಲಕ್ಷಿ ಗಟ್ಟಿ, ಮಂಗಳೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಯಶವಂತ್ ಅಮೀನ್, ಪುರುಷೋತ್ತಮ ಕಲ್ಲಾಪು, ಅತುಲ್ ಬಗಂಬಿಲ, ರಾಜೇಶ್ ಉಳ್ಳಾಲ, ಯೋಗಿಶ್ ಮಂಜನಾಡಿ ಉಪಸ್ಥಿತರಿದ್ದರು.

Comments are closed.