ಕರಾವಳಿ

ಮಂಗಳೂರು ಬೀಚ್‍ಗಳ ಪ್ರವೇಶ ತಡೆಗಟ್ಟಲು ಬೀಚ್‍ಗಳಲ್ಲಿ ಗೃಹರಕ್ಷಕರ ನೇಮಕ

Pinterest LinkedIn Tumblr

ಮಂಗಳೂರು ಮಾರ್ಚ್ 24; ಜಿಲ್ಲಾಧಿಕಾರಿಗಳ ಆದೇಶದಂತೆ ಮಂಗಳೂರು ನಗರದ ಸೊಮೇಶ್ವರ, ಉಳ್ಳಾಲ, ಮೊಗವೀರಪಟ್ನ, ಪಣಂಬೂರು, ಸುರತ್ಕಲ್, ತಣ್ಣೀರುಬಾವಿ 1, ತಣ್ಣೀರುಬಾವಿ 2, ಸಸಿಹಿತ್ಲು ಬೀಚ್‍ಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ನಿರ್ಬಂಧ ಹೇರುವ ದೃಷ್ಟಿಯಿಂದ ಪ್ರತೀ ಬೀಚ್‍ಗೆ ಇಬ್ಬರು ಗೃಹರಕ್ಷಕರಂತೆ ನೇಮಕ ಮಾಡಲಾಗಿದೆ.

ಸಾರ್ವಜನಿಕರು ಗೃಹರಕ್ಷಕರೊಂದಿಗೆ ಸಂಯಮದಿಂದ ವರ್ತಿಸಲು ಕೋರಲಾಗಿದೆ. ಜಿಲ್ಲೆಯ ಹಾಗೂ ರಾಜ್ಯದೆಲ್ಲೆಡೆ ಕೊರೋನಾ ವೈರಸ್‍ನ ಹಾವಳಿ ಜಾಸ್ತಿ ಆಗಿರುವ ಕಾರಣ ಈ ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ.

ಸಾರ್ವಜನಿಕ ಪ್ರದೇಶಗಳಾದ ಬೀಚ್, ಪಾರ್ಕ್‍ಗಳಲ್ಲಿ ಹೆಚ್ಚು ಜನ ಸೇರದೆ, ಮನೆಯ ಒಳಗೆ ಇದ್ದು ರೋಗ ಹರಡದಂತೆ ತಡೆಯಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಪ್ರಕಟಣೆ ತಿಳಿಸಿದೆ.

Comments are closed.