ಕರಾವಳಿ

ವಿಕೆ ಕಾರ್ಯಕ್ರಮ ಹಾಗೂ ಜೋಡುಕೆರೆ ಕಂಬಳ: ಫೆ.29ರಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಂಗಳೂರಿಗೆ 

Pinterest LinkedIn Tumblr

ಮಂಗಳೂರು ಫೆಬ್ರವರಿ 27 :  ವಿಕೆ ಕಾರ್ಯಕ್ರಮ ಹಾಗೂ ಜೋಡುಕೆರೆ ಕಂಬಳದಲ್ಲಿ ಪಾಲ್ಗೊಳ್ಳಲ್ಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಫೆಬ್ರವರಿ 29 ರಂದು ದ.ಕ ಜಿಲ್ಲಾ ಪ್ರವಾಸ ಕೈಗೊಳ್ಳಲ್ಲಿದ್ದಾರೆ.

ಫೆಬ್ರವರಿ 29 ರಂದು ಮಂಗಳೂರಿಗೆ ಆಗಮಿಸಿ ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿನ ಲಾಲ್‍ಭಾಗ್‍ನಲ್ಲಿ ನಡೆಯುವ ವಿಜಯ ಕರ್ನಾಟಕ ದಿನಪತ್ರಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5.30 ಗಂಟೆಗೆ ಬಂಟ್ವಾಳದಲ್ಲಿ ನಡೆಯುವ ವಿಜಯ ವಿಕ್ರಮ ಜೋಡುಕೆರೆ ಕಂಬಳದಲ್ಲಿ ಭಾಗವಹಿಸುವರು.

ಮಾರ್ಚ್ 1 ರಂದು 12.10 ಗಂಟೆಗೆ ಮಂಗಳೂರಿನಿಂದ ವಿಮಾನದ ಮೂಲಕ ನಿರ್ಗಮಿಸುವರು.

Comments are closed.