ಕರಾವಳಿ

ಕೇಂದ್ರ ಸಚಿವರಿಂದ ಅಹ್ವಾನ : ಕಂಬಳ ಕ್ರೀಡೆಯಲ್ಲಿ ಸದ್ದು ಮಾಡಿದ ಕಂಬಳ ವೀರ ಬೆಂಗಳೂರಿಗೆ ಪ್ರಯಾಣ

Pinterest LinkedIn Tumblr

ಮಂಗಳೂರು, ಫೆಬ್ರವರಿ,17: ಕಂಬಳ ಕ್ರೀಡೆಯಲ್ಲಿ ತನ್ನ ಕಾಲ್ಚಳಕದ ಮೂಲಕ ಸದ್ದು ಮಾಡಿದ ಶ್ರೀನಿವಾಸ ಗೌಡ ಅವರು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅಹ್ವಾನದ ಮೇರೆಗೆ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ತೆರಳಿದರು. ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಕಂಬಳ ಓಟಗಾರ ಶ್ರೀನಿವಾಸ ಗೌಡ ಮತ್ತವರ ತಂಡ‌ ಇಂದು ಮುಂಜಾನೆ ಮೂಡಬಿದ್ರೆಯಿಂದ ಹೊರಟಿತು. ವಾರ್ತಾ ಇಲಾಖೆಯ ಸಿಬ್ಬಂದಿ ಅರುಣ್‌ ಕಾಂತ್ ಜತೆಗಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವಿಟ್ ಮಾಡಿ, ಶ್ರೀನಿವಾಸ ಗೌಡ ಅವರಿಗೆ ಸಾಯ್ ನಲ್ಲಿ ತರಬೇತಿಗಾಗಿ ಅಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ತೆರಳಿದರು. ಅಲ್ಲಿ ತಜ್ಞ ತರಬೇತುದಾರರು ಮೌಲ್ಯಮಾಪನ ಮಾಡಲಿದ್ದಾರೆ. ಈ ಮಧ್ಯೆ ಶ್ರೀನಿವಾಸ ಗೌಡ ಅವರು ಮಧ್ಯಾಹ್ನ ೩ರ ಸುಮಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಲಿದ್ದಾರೆ. ಜತೆಗೆ ರಾಜ್ಯದ ಕಾರ್ಮಿಕ ಸಚಿವ, ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರನ್ನು ಭೇಟಿಯಾಗಲಿದ್ದಾರೆ.

Comments are closed.