ಕರಾವಳಿ

ನಂತೂರಿನಲ್ಲಿ ರಸ್ತೆ ಅವಘಡ : ಕಾಲೇಜು ವಿಧ್ಯಾರ್ಥಿ ಮೃತ್ಯು

Pinterest LinkedIn Tumblr

ಮಂಗಳೂರು, ಫೆ 13 : ನಗರದ ನಂತೂರು ಸರ್ಕಲ್‌ ಬಳಿ ನಡೆದ ರಸ್ತೆ ಅಪಾಘಾತದಲ್ಲಿ ನಗರದ ಕಾಲೇಜೊಂದರ ವಿದ್ಯಾರ್ಥಿ ಮೃತ ಪಟ್ಟ ಘಟನೆ ಇಂದು ಸಂಜೆ ಸಂಭವಿಸಿದೆ.

ಅಪಾಘಾತದಲ್ಲಿ ಮೃತಪಟ್ಟ ಯುವಕನನ್ನು ನಗರದ ಬೆಸೆಂಟ್‌ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಮಣ್ಣಗುಡ್ಡೆ ಸಮೀಪದ ಬೋಕ್ಕಪಟ್ಣ ನಿವಾಸಿ ಕಾರ್ತಿಕ್‌ ಮಲ್ಯ ಎಂದು ಗುರುತಿಸಲಾಗಿದೆ.

ಇಂದು ಸಂಜೆ ಕಾರ್ತಿಕ್‌ ತನ್ನ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಯಿಂದ ನಂತೂರ ಬಳಿ ತಲುಪುತ್ತಿದ್ದಂತೆ ಟ್ಯಾಂಕರ್‌ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವಿಧ್ಯಾರ್ಥಿ ಕಾರ್ತಿಕ್ ಮಲ್ಯ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.