ಕರಾವಳಿ

ಕೊಂಚಾಡಿ ಕ್ಷೇತ್ರದಲ್ಲಿ ನಿರ್ಮಿಸಲ್ಪಟ್ಟ ವನಿತಾ ಅಚ್ಚುತ್ ಪೈ ಕನ್ವೆನ್ಷನ್ ಸೆಂಟರ್ ಉದ್ಘಾಟನೆ

Pinterest LinkedIn Tumblr

ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದಲ್ಲಿರುವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ವನಿತಾ ಅಚ್ಚುತ್ ಪೈ ಕನ್ವೆನ್ಷನ್ ಸೆಂಟರ್ ಉದ್ಘಾಟನಾ ಸಮಾರಂಭ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಶುಕ್ರವಾರ ನಡೆಯಿತು.

ಇದೇ ಸಂದರ್ಭದಲ್ಲಿ ಬೆಳಿಗ್ಗೆ 09:28 ರ ಮೀನಾ ಲಗ್ನದಲ್ಲಿ ರಾಜಸ್ಥಾನದ ಜೈಪುರದಲ್ಲಿ ನಿರ್ಮಿಸಲ್ಪಟ್ಟ ಅಮೃತ ಶಿಲಾಮಯ ಶ್ರೀಮತ್ ಸುಧೀಂದ್ರ ತೀರ್ಥರ ವಿಗ್ರಹ ಪ್ರತಿಷ್ಠೆ ಶ್ರೀಗಳವರ ಅಮೃತ ಹಸ್ತಗಳಿಂದ ನಡೆಯಿತು . ಬಳಿಕ ನೂತನವಾಗಿ ನಿರ್ಮಿಸಲ್ಪಟ್ಟ ವನಿತಾ ಅಚ್ಚುತ್ ಪೈ ಕನ್ವೆನ್ಷನ್ ಸೆಂಟರ್ ಉದ್ಘಾಟನೆ ನಡೆಯಿತು.

ಪ್ರಾರಂಭದಲ್ಲಿ ಶ್ರೀ ಸಂಸ್ಥಾನದ ಗುರು ಪರಂಪರೆಯ ಭಾವಚಿತ್ರ ಗಳೊಂದಿಗೆ ಕೇರಳದ ಪ್ರಸಿದ್ಧ ಪಂಚವಾದ್ಯ , ವಿಶೇಷ ವಾದ್ಯ ಗಳೊಂದಿಗೆ ಶ್ರೀಗಳವರನ್ನು ಮೆರವಣಿಗೆಯಲ್ಲಿ ಭವ್ಯ ಸ್ವಾಗತದೊಂದಿಗೆ ಸಭಾಂಗಣದತ್ತ ಕರೆತರಲಾಯಿತು , ನೆರೆದ ವೈದಿಕ ರಿಂದ ವೇದಘೋಷ , ಶ್ರೀಗಳವರ ಮಾರ್ಗದರ್ಶನದಲ್ಲಿ ದ್ವಾರ ಪೂಜೆ ತದನಂತರ ಸಭಾಂಗಣದಲ್ಲಿ ಶ್ರೀಗಳವರಿಂದ ದೀಪ ಬೆಳಗಿಸುವುದರ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು .

ಮೊದಲನೇ ಮಹಡಿಯಲ್ಲಿರುವ ಶ್ರೀ ಸುಧೀಂದ್ರ ಸಭಾ ಭವನದಲ್ಲಿ ಸಭಾಕಾರ್ಯಕ್ರಮ ನೆರವೇರಿತು , ವೇದಿಕೆಯಲ್ಲಿ ಇತ್ತೀಚಿಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ ವಿಜೇತೆ ಕುಮಾರಿ ಸುನಿತಾ ಪ್ರಭು ಮೂರ್ಜೆ ರವರಿಗೆ ಶ್ರೀಗಳವರು ಶಾಲು ಹೊದಿಸಿ ಮಂತ್ರಕ್ಷತೆ ನೀಡಿ ಆಶೀರ್ವದಿಸಿದರು . ಸಭಾಂಗಣದ ಸೇವಾದಾರರಾದ ಹೈದರಾಬಾದಿನ ಉದ್ಯಮಿ ಶ್ರೀ ಅಚ್ಚುತ್ ಪೈ ಹಾಗೂ ಕುಟುಂಭಸ್ಥರಿಗೆ ಶ್ರೀಗಳವರ ಹಸ್ತಗಳಿಂದ ಸನ್ಮಾನಿಸಲಾಯಿತು . ಸ್ವಾಗತ ಭಾಷಣವನ್ನು ದೇವಳದ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ ನಡಿಸಿಕೊಟ್ಟರು , ಮಾರೂರ್ ಶಶಿಧರ್ ಪೈ ಪ್ರಾಸ್ತಾವಿಕ ಭಾಷಣ ಮಾಡಿದರು ಬಳಿಕ ಶ್ರೀಗಳವರಿಂದ ಆಶೀರ್ವಚನ ನಡೆಯಿತು .

ಈ ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ , ಎಂ . ಸುರೇಶ್ ಕಾಮತ್ , ಎಚ್ . ಗೋಕುಲದಾಸ್ ನಾಯಕ್ ,ಉರ್ವಿ ರಾಧಾಕೃಷ್ಣ ಶೆಣೈ , ಮಾರೂರ್ ಶಶಿಧರ್ ಪೈ , ಕೆ . ಅಚ್ಚುತ್ ಪೈ . ಎಂ . ವಿಜಯ್ ಪೈ , ಸಭಾಂಗಣದ ಸೇವಾದಾರರಾದ ಶ್ರೀ ಅಚ್ಚುತ್ ಪೈ , ಪ್ರಕಾಶ್ ಪೈ , ಅನಂತ್ ಪೈ , ಶ್ರೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಿ . ವಾಸುದೇವ್ ಕಾಮತ್ , ಅರುಣ್ ಕಾಮತ್ ,ಜಿ . ರತ್ನಕರ್ ಕಾಮತ್ , ದೀಪಕ್ ಕುಡ್ವ ,ಡಿ . ವೇದವ್ಯಾಸ್ ಕಾಮತ್ , ಅನಿಲ್ ಕಾಮತ್, ಗಣೇಶ್ ಬಾಳಿಗಾ , ಗುರುಪ್ರಸಾದ್ ಕಾಮತ್ , ಪ್ರಶಾಂತ್ ಪೈ ದೀಪಕ್ಚಂದ್ರ ಬಾಳಿಗಾ , ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.