ಕರಾವಳಿ

ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಧರ್ಮ ಜಾಗೃತಿ ಅಭಿಯಾನ ಸಮಾರೋಪ

Pinterest LinkedIn Tumblr

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ಇದರ ವತಿಯಿಂದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧಿಪತಿ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರಿಂದ ಗುರುಸ್ಪಂದನ (ಮನೆ ಮನೆ ಭೇಟಿ ) ಧರ್ಮ ಜಾಗೃತಿ ಅಭಿಯಾನ ಕಾರ್ಯಕ್ರಮ ಮಂಗಳೂರಿನ ಮಣ್ಣಗುಡ್ಡ ಮಠದಕಣಿ, ಬೋಳೂರು, ಕೊಡಿಯಾಲ ಗುತ್ತು ಪ್ರದೇಶದಲ್ಲಿ ಆರಂಭಗೊಂಡು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರ ಮುನಿಯಾಲ್ ದಾಮೋದರ ಆಚಾರ್ಯರ ಮನೆಯಲ್ಲಿ ( ಕೊಡಿಯಾಲಗುತ್ತು ) ಸಮಾರೋಪ ಸಮಾರಂಭ ನಡೆಯಿತು.

ವಿಶ್ವಬ್ರಾಹ್ಮಣ ಸಮಾಜದ ಮನೆ ಮನೆ ಭೇಟಿ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ ಸಮಾಜ ಬಾಂಧವರ ಪರಿಚಯ ಸುಲಭದಲ್ಲಿ ಸಾಧ್ಯವಾಯಿತು ಭೇಟಿ ನೀಡಿದ ಮನೆಯವರ ಕಷ್ಟಗಳೆಲ್ಲಾ ಕಾಳಿಕಾಂಬೆಯ ಅನುಗ್ರಹದಿಂದ ಕ್ಷಿಪ್ರವಾಗಿ ಪರಿಹಾರವಾಗಲಿ ಗುರುಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಪರಮಪೂಜ್ಯ ಸ್ವಾಮಿಜೀಯವರು ಅನುಗ್ರಹ ಭಾಷಣದಲ್ಲಿ ಹೇಳಿದರು.

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಆಚಾರ್ಯ ಶ್ರೀ ಕ್ಷೇತ್ರದ ಶಿಲಾಮಯ ಸುತ್ತು ಪೌಳಿ ಭರದಿಂದ ಸಾಗುತ್ತಿದ್ದು ಸಮಸ್ತ ಭಾಕ್ತಾದಿಗಳ ಸಂಪೂರ್ಣ ಸಹಕಾರದಿಂದ ಶೀಘ್ರದಲ್ಲಿ ಸಂಪನ್ನಗೊಳ್ಳಲಿ ಎಂದು ಹಾರೈಸಿದರು .

ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಮೂರನೇ ಮೊಕ್ತೇಸರ ಲೋಕೇಶ್ ಆಚಾರ್ಯ ಬಿಜೈ ಶ್ರೀಮದ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಬಿ ಸೂರ್ಯ ಕುಮಾರ್ ಶ್ರೀ ಕ್ಷೇತ್ರದ ಮಾಜಿ ಮೊಕ್ತೇಸರರು ಗುರುಸೇವಾ ಪರಿಷತ್ತಿನ ಸದಸ್ಯರು ಹಾಗು ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು . ಪಶುಪತಿ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು

Comments are closed.