ಕರಾವಳಿ

ಸುರತ್ಕಲ್ ಬೀಚ್‌ನಲ್ಲಿ ಸಮುದ್ರ ವಿಹಾರಕ್ಕೆ ತೆರಳಿದ ಓರ್ವ ವಿದ್ಯಾರ್ಥಿನಿ ನೀರು ಪಾಲು : ಮೂವರ ರಕ್ಷಣೆ

Pinterest LinkedIn Tumblr

  

ಮಂಗಳೂರು / ಸುರತ್ಕಲ್: ಇಲ್ಲಿಗೆ ಸಮೀಪದ ಎನ್ ಐ ಟಿಕೆ ಬೀಚ್‌ನಲ್ಲಿ ನೀರಾಟವಾಡುತ್ತಿದ್ದ ವೇಳೆ ನಾಲ್ವರು ನೀರು ಪಾಲಾಗಿದ್ದು ದೋಣಿಯಲ್ಲಿದ್ದ ಮೀನುಗಾರರು ಮೂವರ ರಕ್ಷಣೆ ಮಾಡಿದ್ದು ಈ ವೇಳೆ ಗಂಭೀರ ಗಾಯಗೊಂಡಿದ್ದ ಒಬ್ಬ ಯುವತಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಮೃತಪಟ್ಟ ಯುವತಿಯನ್ನು ಉತ್ತರಾಖಂಡ್ ಮೂಲದ ಎನ್ ಐಟಿ ವಾರಂಗಲ್‌ನ ವಿದ್ಯಾರ್ಥಿನಿ ನಿರ್ಮಾಲ ದಂಗ್‌ವಾಲ್ ( 25) ಎಂದು ಗುರುತಿಸಲಾಗಿದೆ.

ಎನ್ ಐ ಟಿಕೆಯಲ್ಲಿ ಅಯೋಜಿಸಲಾಗಿದ್ದ ಅಂತರ್ ಎನ್ ಐಟಿ ಕ್ರೀಡಾಕೂಟದಲ್ಲಿ ಭಾಗವಹಿಸಲೆಂದ ಬಂದಿದ್ದ ಉತ್ತರಾಖಂಡ್ ಮೂಲದ ವಿದ್ಯಾರ್ಥಿಗಳ ತಂಡ ಸೋಮವಾರ ಕ್ರೀಡಾಕೂಟ ಮುಗಿಸಿ ಹಿಂದಿರುಗುವ ಮುನ್ನ ಸುಮಾರು 23 ವಿಧ್ಯಾರ್ಥಿಗಳು ದೈಹಿಕ ಶಿಕ್ಷಕ ರಾಜು ಒಡೆಲ ನೇತ್ರತ್ವದಲ್ಲಿ ಎನ್ ಐ ಟಿಕೆ ಬೀಚಲ್ಲಿ ವಿಹಾರಕ್ಕೆ ಆಗಮಿಸಿದ್ದು ಈ ವೇಳೆ ಸಮುದ್ರದ ಆಳದ ಅರಿವಿಲ್ಲದವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಿದ್ದು ಈ ಸಂದರ್ಭ ದೊಡ್ಡ ಅಲೆಗಳ ಹೊಡೆತಕ್ಕೆ ಸಿಲುಕಿ ನಾಲ್ವರು ಕೊಚ್ಚಿಹೋಗಿದ್ದಾರೆ. ಈ ವೇಳೆ ಮೂವರನ್ನು ಸ್ಥಳೀಯರು ರಕ್ಷಿಸಿದ್ದು ನಿರ್ಮಾಲ ದಂಗ್‌ವಾಲ್ ಗಂಭೀರ ಗಾಯಗೊಂಡು ಆಸ್ಪತ್ರೆ ದಾರಿಯಲ್ಲಿ ಮೃತಪಟ್ಟಿರುತ್ತಾರೆ.

 ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.