ಕರಾವಳಿ

ವೇದಮೂರ್ತಿ ಗಣಪತಿ ಆಚಾರ್ಯರಿಗೆ ಕಲ್ಕೂರ ವೇದವಾರಿಧಿ ಸಿರಿ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು : ಚತುರ್ವೇದ ಪಾರಂಗತ, ಘನವಿದ್ವಾಂಸ ಶ್ರೀ ಗಣಪತಿ ಆಚಾರ್ಯ ಕದ್ರಿ ಇವರಿಗೆ ಇವರ 85ನೇ ವರ್ಷದಾಚರಣೆಯ ಸಂದರ್ಭ ಕದ್ರಿ ಕಂಬಳ ರಸ್ತೆ ಶ್ರೀ ಗೋಪಾಲಕೃಷ್ಣ ಮಠದಲ್ಲಿ ಇತ್ತೀಚೆಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಲ್ಕೂರ ವೇದವಾರಿಧಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ ಕಲ್ಕೂರರು ಫಲಪುಷ್ಪ ಸಮರ್ಪಿಸಿ ಸ್ಮರಣಿಕೆ ಪ್ರಶಸ್ತಿ ಫಲಕದೊಂದಿಗೆ ಆಚಾರ್ಯ ದಂಪತಿಯನ್ನು ಗೌರವಿಸಿದರು. ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಶಾಲು ಹೊದಿಸಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಂ. ಬಿ. ಪುರಾಣಿಕ್, ಗೋವಿಂದಾಚಾರ್, ನಿತ್ಯಾನಂದ ಕಾರಂತ ಪೊಳಲಿ, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ ಹಾಗೂ ಹಲವಾರು ವೈದಿಕ ವಿದ್ವಾಂಸರು ಶುಭ ಹಾರೈಸಿದರು.

Comments are closed.