ಕರಾವಳಿ

ಸಾಗುವಾನಿ ಮರ ಕಳವು; 1 ಲಕ್ಷ ರೂ. ಮೌಲ್ಯದ ಸಾಗುವಾನಿ ಸಹಿತ ಓರ್ವ ಬಂಧನ

Pinterest LinkedIn Tumblr

ಕುಂದಾಪುರ: ಖಚಿತ ಮಾಹಿತಿ ಮೇರೆಗೆ ಕೊಲ್ಲೂರು ವಲಯ ವೈಲ್ಡ್ ಲೈಪ್ ವಿಭಾಗದ ಅಧಿಕಾರಿಗಳು ಸಾಗವಾನಿ ಮರ ಕಡಿದು ಸೈಜ್ ಮಾಡಿಟ್ಟಿದ್ದ ಮನೆಗೆ ದಾಳಿ ನಡೆಸಿ 1 ಲಕ್ಷ ರೂ ಮೌಲ್ಯದ ಸಾಗವಾನಿ ನಾಟ ವಶಕ್ಕೆ ಪಡೆದಿದ್ದು, ಒಬ್ಬರು ಬಂಧಿಸಲಾಗಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ.

ವಂಡ್ಸೆ ಗ್ರಾಮ ಹಳ್ಳಿಬೇರು ವಿಜಯಾ (31) ಎಂಬವರ ಬಂಧಿಸಿದ್ದು, ಮತ್ತೊಬ್ಬ ಆರೋಪಿ ಶಿರಸಿ ಹಾಲಗಲ್ ನಿವಾಸಿ ಸಮೀ‌ಉಲ್ಲಾ (19) ಪರಾರಿಯಾಗಿದ್ದಾರೆ.

ವಂಡ್ಸೆ ಗ್ರಾಮ ಚಿತ್ತೂರು ವಲಯ ರಕ್ಷಿತಾರಣ್ಯದಲ್ಲಿ ವನ್ಯಜೀವ ಸಂರಕ್ಷಣಾ ವಿಭಾಗದವರು ಸಾಗವಾನಿ ನಡುತೋಪು ಮಡಿದ್ದರು. ರಾತ್ರಿ ಸಾಗವಾನಿ ಮರಕಳವು ಮಾಡಿ, ಮನೆಯಲ್ಲಿ ದ್ವಾರಬಾಗಿಲಿಗಾಗಿ ಸೈಜ್ ಮಾಡಿ ಇಡಲಾಗಿತ್ತು. ಸಾಗವಾನಿ ಮರಗಳು ಕಳವು ವೈಲ್ಡ್ ಲೈಪ್ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದ್ದು, ರಾತ್ರಿ ಗಸ್ತು ನಡೆಸಿದರೂ ಮರಗಳ್ಳರು ತಪ್ಪಿಸಿಕೊಳ್ಳುತ್ತಿದ್ದರು. ಮರಕಳವು ಮಾಡುತ್ತಿರುವವರು ಸ್ಥಳೀಯರೆಂಬ ಅನುಮಾನ ಕೂಡಾ ಇತ್ತು.

ಶನಿವಾರ ಹಳ್ಳಿಬೇರು ಎಂಬಲ್ಲಿ ಸಾಗವಾನಿ ಮರ ಕಡಿದು ಸೈಜ್ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಕೊಲ್ಲೂರು ವೈಲ್ಡ್ ಲೈಪ್ ವಿಭಾಗಕ್ಕೆ ಸಿಕ್ಕಿತ್ತು. ಕೊಲ್ಲೂರು ಆರ್‌ಎಫ್‌ಒ ದಯಾನಂದ, ವನ್ಯಜೀವಿ ವಿಭಾಗದ ಅಧಿಕಾರಿ ರಾಘವೇಂದ್ರ ನಾಯಕ್, ಫಾರೆಸ್ ಗಾರ್ಡ್ ದೇವಿಪ್ರಸಾದ್, ಮಂಜುನಾಥ್ ಹಾಗೂ ಚಾಲಕ ಚಿದಂಬರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಬಂಧಿತ ವ್ಯಕ್ತ ನ್ಯಾಯಾಧೀಶರ ಮುಂದು ಹಾಜರು ಪಡಿಸಿದ್ದು, ನ್ಯಾಯಾದೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಾಗವಾನಿ ಮರ ಕಳವು ಮಾಡಿ ಮಾರಾಟ ಮಾಡುವ ತಂಡ ವಂಡ್ಸೆಯಲ್ಲಿ ಸಕ್ರಿಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Comments are closed.