ಮಂಗಳೂರು : ಖ್ಯಾತ ಚಲನಚಿತ್ರ ನಟ ಶ್ರೀ ಅರ್ಜುನ್ ಸರ್ಜಾ ಅವರು ಗುರುವಾರ ಮಂಗಳೂರಿನ ಬೋಳಾರದಲ್ಲಿರುವ ಶ್ರೀ ಮುಖ್ಯಪ್ರಾಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮುಖ್ಯಪ್ರಾಣ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಈ ವೇಳೆ ಶ್ರೀ ಕ್ಷೇತ್ರದ ವತಿಯಿಂದ ಅರ್ಜುನ್ ಸರ್ಜಾ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಚೆನ್ನೈಯ ಗೇರುಗಂಬಾಕ್ಕಂನಲ್ಲಿ ಬೃಹತ್ ಹನುಮಾನ್ ದೇವಸ್ಥಾನವೊಂದನ್ನು ನಿರ್ಮಿಸುತ್ತಿದ್ದು, ಅದಕ್ಕಾಗಿ ಮಂಗಳೂರಿನ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಬೋಳಾರ ಜತೆ ಪೊಳಲಿ ಕ್ಷೇತ್ರದ ವಾಸ್ತುಶಿಲ್ಪ ಮತ್ತು ಮರದ ಕೆತ್ತನೆಯನ್ನು ವೀಕ್ಷಿಸುವುದಕ್ಕಾಗಿ ಆಗಮಿಸಿದ್ದರು.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಅರ್ಜುನ್ ಸರ್ಜಾ ಅವರು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕ್ಷೇತ್ರದ ವಾಸ್ತುಶಿಲ್ಪ, ಕೆತ್ತನೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾಸ್ತುಶಿಲ್ಪ, ಕೆತ್ತನೆ ಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ, ತನ್ನ ದೇವಸ್ಥಾನದಲ್ಲೂ ಸಾಧ್ಯವಾದಷ್ಟು ಅಳವಡಿಸುವುದಾಗಿ ತಿಳಿಸಿದರು. ಪೊಳಲಿ ಕ್ಷೇತ್ರದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿ ಗೌರವಿಸಿದರು. ತಾರಾನಾಥ ಶೆಟ್ಟಿ ಬೋಳಾರ, ಸಂತೋಷ್ ಶೆಟ್ಟಿ, ಶಿಲ್ಪಿ ಕುಬೇರಾ ಜತೆಗಿದ್ದರು.
Comments are closed.