ಕರಾವಳಿ

ಬೈಂದೂರಿನ ತಿಮ್ಮೇಶ್, ಕಂಡ್ಲೂರು ಠಾಣೆ ಶ್ರೀಧರ್ ನಾಯ್ಕ್ ಸೇರಿ ವಿವಿಧ ಠಾಣೆಯ 47 ಪಿಎಸ್ಐಗಳ ವರ್ಗ

Pinterest LinkedIn Tumblr

ಉಡುಪಿ: ಪೊಲೀಸ್ ಇಲಾಖೆಯ ಪಶ್ಚಿಮ ವಲಯದ ಪೊಲೀಸ್ ಸಿಬ್ಬಂದಿ ಮಂಡಳಿಯ ನಡಾವಳಿಯ ಸರ್ವಾನುಮತದ ನಿರ್ಣಯದಂತೆ ಈ ವಲಯಕ್ಕೆ ಒಳಪಡುವ ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಗೂ ಉತ್ತರಕನ್ನಡ ಜಿಲ್ಲೆಗಳ ಒಟ್ಟು 47 ಮಂದಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ಐ ಸಿವಿಲ್) ಗಳನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

(ಬೈಂದೂರು ಪಿಎಸ್ಐ ತಿಮ್ಮೇಶ್, ಕಂಡ್ಲೂರು ಪಿಎಸ್ಐ ಶ್ರೀಧರ್ ನಾಯ್ಕ್)

ಕುಂದಾಪುರ ಗ್ರಾಮಾಂತರ ಠಾಣೆ (ಕಂಡ್ಲೂರು) ಪಿಎಸ್ಐ ಶ್ರೀಧರ್ ನಾಯ್ಕ್, ಬೈಂದೂರು ಠಾಣೆ ಪಿಎಸ್ಐ ತಿಮ್ಮೇಶ್ ಬಿ.ಎನ್. ಅವರನ್ನು ವರ್ಗಾಯಿಸಲಾಗಿದ್ದು ತಿಮ್ಮೇಶ್ ಅವರನ್ನು ಕಾರ್ಕಳ ನಗರ ಠಾಣೆ ಹಾಗೂ ಶ್ರೀಧರ್ ನಾಯ್ಕ್ ಅವರನ್ನು ಶಂಕರನಾರಾಯಣ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ಮಲ್ಪೆ ಠಾಣೆಯ ಪಿಎಸ್ಐ ಆಗಿರುವ ಮಧು ಬಿ. ಅವರನ್ನು ಬೈಂದೂರಿಗೂ ಮತ್ತು ಅಮಾಸೆಬೈಲಿನ ಉಪನಿರೀಕ್ಷಕ ಸುದರ್ಶನ್ ಅವರನ್ನು ಕುಂದಾಪುರ ಸಂಚಾರಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಬಂಟ್ವಾಳ ನಗರ ಅಪರಾಧ ವಿಭಾಗದಿಂದ ಸುಧಾಕರ್ ತೋನ್ಸೆಯವರನ್ನು ಹಿರಿಯಡಕ ಠಾಣೆಗೆ, ಸಿಎಸ್ಪಿ ಹೆಜಮಾಡಿಯಿಂದ ಶೇಖರ್ ಅವರನ್ನು ಉಡುಪಿ ಸಂಚಾರ ಠಾಣೆಗೆ, ನೀತು ಗುಡೆ ಅವರನ್ನುಉತ್ತರಕನ್ನಡದ ಮಂಕಿ ಠಾಣೆಯಿಂದ ಮಲ್ಪೆಗೆ ವರ್ಗಾಯಿಸಲಾಗಿದೆ. ಎಲ್ಲಾ 47 ಮಂದಿ ಪಿಎಸ್ಐಯವರ ವರ್ಗಾವಣೆ ಆದೇಶ ಇಲ್ಲಿದೆ ನೋಡಿ.

Comments are closed.