ಕರಾವಳಿ

ಕುಂದಾಪುರ ಸಮೀಪದ ಕೋಟಾದಲ್ಲಿ ಕಾಶೀ ಮಠಾಧೀಶರ “ಚಾತುರ್ಮಾಸ ದಿಗ್ವಿಜಯ” ಮಹೋತ್ಸವ

Pinterest LinkedIn Tumblr

ಮಂಗಳೂರು, ಆಕ್ಟೋಬರ್.19 : ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವೃತವು ಕೋಟಾ ಶ್ರೀ ಕಾಶೀಮಠದ ಶ್ರೀ ಮುರಳೀಧರ ಕೃಷ್ಣ ದೇವಳದಲ್ಲಿ ಸಂಪನ್ನಗೊಂಡಿದ್ದು ಆ ಪ್ರಯಕ್ತ “ಚಾತುರ್ಮಾಸ ದಿಗ್ವಿಜಯ” ಮಹೋತ್ಸವ ಇಂದು ಕೋಟಾ ಕ್ಷೇತ್ರದಲ್ಲಿ ನಡೆಯಿತು.

ಶ್ರೀಗಳವರ ದಿಗ್ವಿಜಯ ಮಹೋತ್ಸವವು ಕೋಟಾ ಶ್ರೀ ಕಾಶೀಮಠದಿಂದ ಸಾಯಂಕಾಲ ಪ್ರಾರಂಭವಾಗಿದ್ದು, ,ಸುಮಾರು 10ಕ್ಕೂ ಅಧಿಕ ವಿಶೇಷ ವರ್ಣರಂಜಿತ ಟ್ಯಾಬ್ಲೊಗಳ,ಕೇರಳದ ವಿಶೇಷ ಚಂಡೆ ವಾದನ,ಪಂಚವಾದ್ಯಗಳು,ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ,ಹುಲಿವೇಷ,ಸ್ತಬ್ಧಚಿತ್ರಗಳು ದಿಗ್ವಿಜಯ ಯಾತ್ರೆಯಲ್ಲಿ ಪಾಲ್ಗೋಂಡಿದ್ದರು.ದಿಗ್ವಿಜಯ ಯಾತ್ರೆ ನಡೆಯುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ,ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಊರು ಪರವೂರುಗಳಿಂದ ಸಾವಿರಾರು ಜಿ.ಎಸ್.ಬಿ ಸಮಾಜ ಭಾಂಧವರು,ದೇವಳದ ಆಡಳಿತ ಮಂಡಳಿಯ ಪದಾದಿಕಾರಿಗಳು,ವಿವಿಧ ಭಜನಾಮಂಡಳಿಗಳು ಪಾಲ್ಗೋಂಡಿದ್ದರು. ದಿಗ್ವಿಜಯ ಯಾತ್ರೆಯು ಕೋಟಾ ಕಾಶಿ ಮಠದಿಂದ ಪ್ರಾರಂಭಗೊಂಡು ಉತ್ತರ ಕೋಟದಿಂದ ಮಣೂರು ರಾಷ್ಟ್ರೀಯ ಹೆದ್ದಾರಿ ಮೂಲಕ ದಕ್ಷಿಣ ಕೋಟಾ ಕಡೆಗೆ ತಲುಪಿ ಶ್ರೀದೇವಳಕ್ಕೆ ಹಿಂತಿರುಗಿತು.

ಈ ಎಲ್ಲಾ ಪ್ರದೇಶಗಳಲ್ಲಿ ವಿಶೇಷ ಊಟ,ಉಪಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ದಿಗ್ವಿಜಯ ಯಾತ್ರೆಗೆ ಆಗಮಿಸಿದ ಎಲ್ಲಾ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಗಾಂಧಿ ಮೈದಾನ , ಶಂಭವಿ ಶಾಲೆಯ ಮೈದಾನ , ಸ್ಪರ್ಶ ಮೈದಾನ ಮಣೂರುನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

Comments are closed.