ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ, ಮಹಾಮಾಯಿ ದೇವಸ್ಥಾನ ರಥಬೀದಿ ಮಂಗಳೂರು, ಇದರ 97ನೇ ವರ್ಷಾಚರಣೆಯ ಅಂಗವಾಗಿ ನವರಾತ್ರಿಉತ್ಸವದ ಸಂದರ್ಭಯಕ್ಷಗಾನಕಲಾವಿದ ಬಿ.ಟಿ ಕುಲಾಲ್ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯಗೌರವಾಧ್ಯಕ್ಷರೂದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷರೂಆಗಿರುವಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಎಂ.ಆರ್.ಕಾಮತ್ ಹಾಗೂ ಚೆನ್ನೈನಡಾ| ಭಾಸ್ಕರರಾವ್ ಮಟ್ಟು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಯಕ್ಷಗಾನ ಸಂಘದಅಧ್ಯಕ್ಷ ಶ್ರೀನಾಥ ಪ್ರಭು, ಸಂಚಾಲಕ ಬಿ. ನಾಗೇಶ ಪ್ರಭು, ಸದಸ್ಯರಾದ ಸಂಜಯರಾವ್, ಜನಾರ್ದನ ಹಂದೆ , ಹರಿಶ್ಚಂದ್ರ ನಾಯ್ಗ ಮಾಡೂರು, ಶೋಭಾ ಐತಾಳ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಂಭವಿ ವಿಜಯ-ತಾಳಮದ್ದಳೆ ಹಾಗೂ ಪಾಪಣ್ಣ ವಿಜಯಗುಣ ಸುಂದರಿಯಕ್ಷಗಾನ ಬಯಲಾಟಜರಗಿತು.
Comments are closed.