ಕರಾವಳಿ

ದಿ | ಸಂತೋಷ್ ಶೆಟ್ಟಿಯವರ 25ನೇ ವರ್ಷದ ಸವಿನೆನಪಿಗಾಗಿ ರೈಸಿಂಗ್ ಫ್ರೆಂಡ್ಸ್‌ನಿಂದ “ಮಠದಕಣಿ ಹುಲಿ”

Pinterest LinkedIn Tumblr

ಮಂಗಳೂರು,ಆಕ್ಟೋಬರ್.08: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಇದರ ವೈಭವದ ಮಂಗಳೂರು ದಸರಾ – 2019ರ ಪ್ರಯುಕ್ತ ದಿ | ಸಂತೋಷ್ ಶೆಟ್ಟಿ ಮಠದಕಣಿ ಇವರ 25ನೇ ವರ್ಷದ ಸವಿನೆನಪಿಗಾಗಿ ಅರ್ಪಿಸಲಾಗುವ “ಮಠದಕಣಿ ಹುಲಿ” ಸೋಮವಾರ ಅಯುಧಪೂಜೆಯ ಶುಭದಿನದಂದು ಮಠದಕಣಿಯ ಶ್ರೀ ವೀರ ಭದ್ರ ಮಹಮಾಯಿ ಕಲಾಮಂದಿರದಲ್ಲಿ “ಹುಲಿವೇಷದ ಊದು” ಹಾಕುವ ಕಾರ್ಯಕ್ರಮ ಹುಲಿವೇಶಕ್ಕೆ ಬಣ್ಣ ಹಚ್ಚುವ ಕಟೀಲಿನ ಖ್ಯಾತ ಕಲಾವಿದರಾದ ಮಾಸ್ಟರ್ ವಸಂತ್ ಇವರ ನೇತ್ರತ್ವದಲ್ಲಿ ನಡೆಯಿತ್ತು.

ಈ ವೇಳೆ ಹುಲಿವೇಷ ಹಾಕಲಿರುವ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ಸಂಜೆ ಜಂಡೆ ಮೇರವಣಿಗೆ ನಡೆಯಿತು. ಮಂಗಳವಾರ ಮಧ್ಯಾಹ್ನ ಮಠದಕಣಿಯ ಶ್ರೀ ವೀರಭದ್ರ ದೇವಸ್ಥಾನದ ಮುಂಭಾಗದಲ್ಲಿ ಹುಲಿವೇಷದ ಬೃಹತ್ ಹುಲಿಕುಣಿತ ಪ್ರದರ್ಶನ ನಡೆಯಿತು. ಈ ಹುಲಿವೇಷ ತಂಡವು ಮಂಗಳವಾರ ಸಾಯಂಕಾಲ ನಡೆಯಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ವೈಭವದ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದೆ.

By : Sathish Kapikad / Mob : 9035089084

Comments are closed.