ಕರ್ನಾಟಕ

ರಜೆಗೆ ಊರಿಗೆ ತೆರಳಿದ್ದ ಶಂಕರನಾರಾಯಣ ಪೊಲೀಸ್ ಕಾನ್ಸ್‌ಟೆಬಲ್ ಶವ ತರಿಕೆರೆ ಕೆರೆಯಲ್ಲಿ ಪತ್ತೆ

Pinterest LinkedIn Tumblr

ಚಿಕ್ಕಮಗಳೂರು/ಉಡುಪಿ: ಕೆಲವು ದಿನಗಳ ಹಿಂದೆ ರಜೆಗೆಂದು ತನ್ನ ಊರಿಗೆ ತೆರಳಿದ್ದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಶಂಕರನಾರಾಯಣ ಪೊಲೀಸ್ ಠಾಣೆ ಸಿಬ್ಬಂದಿಯ ಮೃತದೇಹ ತರಿಕೆರೆ ತಾಲೂಕಿನ ಬೆಟ್ಟದ ಕೆರೆಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಮೂಲತಃ ಯರದಂಕಲು ಗ್ರಾಮದ ಲಿಂಗದಹಳ್ಳಿಯ ಮಲ್ಲೇಶಪ್ಪ (27) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ. ಇವರು ಸುಮಾರು ಮೂರುವರೆ ವರ್ಷಗಳಿಂದ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯಾಗಿದ್ದು ತನ್ನ ವೃತ್ತಿಜೀವನವನ್ನು ಈ ಠಾಣೆಯಿಂದ ಆರಂಭಿಸಿದ್ದರೆನ್ನಲಾಗಿದೆ. ಆತ್ಮಹತ್ಯೆಯೋ ಅಥವಾ ಅಸ್ವಾಭವಿಕ ಸಾವೋ ಎನ್ನುವ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಮಲ್ಲೇಶಪ್ಪ ಆ.16 ರಂದು ವೈದ್ಯಕೀಯ ರಜೆ ಪಡೆದು ಊರಿಗೆ ತೆರಳಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.