ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳಪದವು ಗ್ರಾಮದ ಅರ್ಬಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಶುಕ್ರವಾರ ಫಾಲ್ಸ್ ಬಳಿ ಪತ್ತೆಯಾಗಿದೆ.
ನಂದಳಿಕೆ ಗ್ರಾಮದ ಕೆದಿಂಜೆ ಮಂಜರಪಲ್ಕೆಯ ಅಬ್ಬನಡ್ಕ ನಿವಾಸಿ ಕೃಷ್ಣ ಮೂಲ್ಯ ಎನ್ನುವರ ಪುತ್ರ ಸುದೇಶ್(24) ಮೃತಪಟ್ಟವರು.
ಸುದೇಶ್ ಆ.15ರಂದು ಸ್ನೇಹಿತರಾದ ರಾಕೇಶ್, ಸಂತೋಷ್ ಹಾಗೂ ಭರತ್ ಪೂಜಾರಿ ಎನ್ನುವರ ಜೊತೆ ಅರ್ಬಿ ಫಾಲ್ಸ್ ಗೆ ತೆರಳಿದ್ದು ಅಲ್ಲಿ ತಮ್ಮ ಮೊಬೈಲ್ ಫೋನ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಈ ವೇಳೆ ಭರತ್ ಈಜಿಕೊಂಡು ರಕ್ಷಣೆ ಪ್ರಯತ್ನ ಮಾಡಿದ್ದರೂ ಕೂಡ ನೀರಿನ ಹರಿವು ಜಾಸ್ಥಿಯಿದ್ದ ಕಾರಣ ಸುದೇಶ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ಹುಡುಕಾಟ ನಡೆಸಲಾಗಿತ್ತು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.