ಕರಾವಳಿ

ದ.ಕ. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ವರ್ಗಾವಣೆ : ಪತ್ರಕರ್ತರಿಗೆ ಹಲವು ಯೋಜನೆಗಳನ್ನು ರೂಪಿಸಿದ ಜನಸ್ನೇಹಿ ಖಾದರ್ ಶಾರಿಗೆ ಮತ್ತೆ ಜಿಲ್ಲೆಯ ಪ್ರಭಾರ

Pinterest LinkedIn Tumblr

ಮಂಗಳೂರು, ಜೂನ್.14: ದ.ಕ. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರನ್ನು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿಯನ್ನಾಗಿ ಬೆಂಗಳೂರಿಗೆ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಜಗತ್ತಿನಾದ್ಯಂತ ಅತೀ ಶೀಘ್ರವಾಗಿ ಸುದ್ಧಿ ಬಿತ್ತರಿಸುವ ಅಂತಾರ್ಜಾಲ (website) ತಾಣ (ವರದಿಗಾರರನ್ನು) ವನ್ನೇ  ಜಿಲ್ಲಾಡಳಿತದ ಎಲ್ಲಾ ಕಾರ್ಯಕ್ರಮಗಳಿಂದ ( ಚುನಾವಣಾ ಪಾಸ್ ಸೇರಿದಂತೆ) ಹೊರಗಿಡುತ್ತಿದ್ದ ಹಾಗೂ ತಮಗೆ ಬೇಕಾದವರಿಗೆ ಮಾತ್ರ ಮಣೆ ಹಾಕುತ್ತಿದ್ದ ರೋಹಿಣಿ ಮೇಡಂ ಅವರಿಗೆ ತದ್ವಿರುದ್ಧವಾಗಿ ಎಲ್ಲಾ ಪತ್ರಕರ್ತರನ್ನು ಸಮಾನವಾಗಿ ನೋಡುತಿದ್ದ ಈ ಮೊದಲು ದ.ಕ.ಜಿಲ್ಲೆಯಲ್ಲಿ ವಾರ್ತಾಧಿಕಾರಿಯಾಗಿದ್ದ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಅವರಿಗೆ ಮತ್ತೆ ದ.ಕ. ಜಿಲ್ಲೆಯ ಪ್ರಭಾರವನ್ನು ಹೆಚ್ಚುವರಿಯಾಗಿ ವಹಿಸಲಾಗಿದ್ದು, ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ರೋಹಿಣಿ ಮೇಡಂ

ಪತ್ರಕರ್ತರಿಗೆ ಅತೀ ಶೀಘ್ರವಾಗಿ ವಾಟ್ಸ್ ಆಪ್ ಮೂಲಕ ಮಾಹಿತಿಗಳು ದಿನದ ಸುದ್ದಿಗಳನ್ನು ಸರಿಯಾದ ಸಮಯಕ್ಕೆ ರವಾನೆ ಮಾಡುವ ವ್ಯವಸ್ಥೆಯನ್ನು ಸಮರ್ಪಕವಾಗಿ ವ್ಯವಸ್ಥೆಗೊಳಿಸುವ ಮೂಲಕ ದ.ಕ.ಜಿಲ್ಲೆಯಲ್ಲಿ ಪತ್ರಕರ್ತರು ಮಾತ್ರವಲ್ಲದೇ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದ್ದ ಜನಸ್ನೇಹಿ ಅಧಿಕಾರಿ ಬಿ.ಎ.ಖಾದರ್ ಷಾ ಮತ್ತೆ ಜಿಲ್ಲೆಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಮತ್ತೆ ಸಂತಸ ಮೂಡಿಸಿದೆ.

2010 ರಲ್ಲಿ ಚಿಕ್ಕಮಗಳೂರಿನಲ್ಲಿ ವಾರ್ತಾಧಿಕಾರಿ ಆಗಿ ಕೆಲಸ ನಿರ್ವಹಿಸಿದ ಬೈಕಂಪಾಡಿ ಅಬ್ದುಲ್ ಖಾದರ್ ಷಾ 2013 ರಲ್ಲಿ ಉಡುಪಿಗೆ ವರ್ಗಾವಣೆಯಾದರು. ಅಲ್ಲಿ ನಾಲ್ಕು ತಿಂಗಳು ಕರ್ತವ್ಯ ನಿರ್ವಹಿಸಿದ ನಂತರ ಮಂಗಳೂರಿಗೆ ವಾರ್ತಾಧಿಕಾರಿಯಾಗಿಯೇ ವರ್ಗಾವಣೆಗೊಂಡರು. ಬಳಿಕ ದ.ಕ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಯಾಗಿದ್ದ ಬಿ.ಎ.ಖಾದರ್ ಷಾ ಅವರಿಗೆ ಭಡ್ತಿ ಲಭಿಸಿದ್ದು, ಷಾ ಅವರಿಗೆ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಭಡ್ತಿ ನೀಡಲಾಗಿತ್ತು.

2018 ಅಕ್ಟೋಬರ್ 2ಕ್ಕೆ ಮಂಗಳೂರಿನಲ್ಲಿ ಅವರಿಗೆ ಕರ್ತವ್ಯದ ಐದನೇ ವರ್ಷ. ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಷಾ ಅವರು, ಅಧಿಕಾರ ವಹಿಸಿದ ನಂತರ ಅವರು ಮೊದಲು ಮಾಡಿದ ಕೆಲಸ ಅಂದರೆ ಹಸ್ತಚಾಲಿತ ಸಂವಹನ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿದ್ದು.

ಮಂಗಳೂರಿನಲ್ಲಿ 2013 ರಲ್ಲಿ ಮಾನ್ಯತೆ ಪಡೆದ ಪತ್ರಕರ್ತರ ಸಂಖ್ಯೆ 35 ಮಾತ್ರ ಇತ್ತು ಈಗ ಅದು 55ಕ್ಕೆ ಏರಿದೆ. ಪತ್ರಕರ್ತರೊಂದಿಗೆ ಉತ್ತಮ ಸಂಬಂಧ ಬೆಳೆಸಿ ಕೊಂಡಿರುವ ಷಾ ಅವರು ಪತ್ರಕರ್ತರ ಕಲ್ಯಾಣಕ್ಕಾಗಿ ಅರೋಗ್ಯ ಕಾರ್ಡ್ ಗಳು ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಕೊಟ್ಟ ಒರ್ವ ದಕ್ಷ ಅಧಿಕಾರಿ.

ಮಂಗಳೂರು ಪತ್ರಕರ್ತರಿಗೆ ಅತೀ ಶೀಘ್ರವಾಗಿ ವಾಟ್ಸ್ ಆಪ್ ಮೂಲಕ ಮಾಹಿತಿಗಳು ದಿನದ ಸುದ್ದಿಗಳನ್ನು ಸರಿಯಾದ ಸಮಯಕ್ಕೆ ರವಾನೆ ಮಾಡುವ ವ್ಯವಸ್ಥೆಯನ್ನು ಬಿ.ಎ.ಖಾದರ್ ಷಾ ಸಮರ್ಪಕವಾಗಿ ವ್ಯವಸ್ಥೆಗೊಳಿಸಿ ಪತ್ರಕರ್ತರಿಗೆ ಅನುಕೂಲ ಮಾಡಿ ಕೊಟ್ಟಿದ್ದರು.

ಮಂಗಳೂರು ಲೊಕೋಪಯೋಗಿ ಕಟ್ಟಡದ ಎರಡನೇ ಮಹಡಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ವಾರ್ತಾ ಇಲಾಖೆಯನ್ನು ನವೀಕರಣ ಗೊಳಿಸುವ ಪ್ರಕ್ರಿಯೆ ಆರಂಭಿಸಿದವರು ಖಾದರ್ ಷಾ. ಪ್ರತ್ಯೇಕ ಶೌಚಾಲಯವಿಲ್ಲದ ಕಛೇರಿಗೆ ಅದರ ವ್ಯವಸ್ಥೆಯನ್ನು ಮಾಡುವಲ್ಲಿ ಯಶಸ್ವೀಯಾಗಿದ್ದರು.

ವರದಿ / ಚಿತ್ರ : ಸತೀಶ್ ಕಾಪಿಕಾಡ್

Comments are closed.