ಮಂಗಳೂರು : ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಮಂಗಳೂರು ಇದರ ಶ್ರೀ ವೀರ ವೆಂಕಟೇಶ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನ ಸ್ವರ್ಣ ಗರುಡ ವಾಹನ ಪೂರ್ಣಗೊಂಡಿದ್ದು ಸ್ವರ್ಣ ಗರುಡ ವಾಹನದ ಪುರಪ್ರವೇಶ ಭವ್ಯ ಮೆರವಣಿಗೆಯು ಕೆನರಾ ಹೈಸ್ಕೂಲ್ ಡೊಂಗರಕೇರಿ ಬಳಿಯಿಂದ ಪ್ರಾರಂಭಗೊಂಡು ನ್ಯೂ ಚಿತ್ರ , ರಥಬೀದಿ ಮುಖಾಂತರ ವರ್ಣರಂಜಿತ ಮೆರವಣಿಗೆ ಶ್ರೀ ದೇವಳಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಸಾವಿರಾರು ಭಜಕರು ಪಾಲ್ಗೊಂಡರು. ಇದೇ ಬರುವ ತಾ|| 16.05.2019ನೇ ಗುರುವಾರದಂದು ಬೆಳ್ಳಗ್ಗೆ 10.47ಕ್ಕೆಈ ನೂತನ ಸ್ವರ್ಣ ಗರುಡ ಸಮರ್ಪಣೆಯು ಶ್ರೀ ಕಾಶೀ ಮಠಾಧೀಶ ಪರಮ ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಲಿದೆ.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.