ಕರಾವಳಿ

ದೇವ,ದೈವ ಸಾನಿಧ್ಯಗಳ ಪುನರುತ್ಥಾನದಿಂದ ಲೋಕ ಕಲ್ಯಾಣ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಅತ್ತಾವರ ಶ್ರೀಕೃಷ್ಣ ಮಂದಿರದ ಶಿಲನ್ಯಾಸ ಕಾರ್ಯವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ನೆರವೇರಿಸಿದರು.

ನಂತರ ಮಾತನಾಡಿದ ಅವರು ಜಗತ್ತಿನ ಕಲ್ಯಾಣಕ್ಕಾಗಿ ಭೂ ಲೋಕದಲ್ಲಿ ದೇವರ,ದೈವಗಳು ಅವತಾರವೆತ್ತಿ ಬಂದಿರುವುದು ಪುರಾಣಗಳಲ್ಲಿ ಕಂಡು ಬರುತ್ತದೆ. ಹಾಗೆಯೇ ಇಂದು ಲೋಕ ಕಲ್ಯಾಣಕ್ಕಾಗಿ ದೈವ ಸಾನಿಧ್ಯಗಳ ಪುನರುತ್ಥಾನ ಆಗ ಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾಲಿಕೆ ಸದಸ್ಯ ದಿವಾಕರ್ ಪಾಂಡೇಶ್ವರ,ಲಲ್ಲೇಶ್ ಕುಮಾರ್,ವಸಂತ್ ಜೆ ಪೂಜಾರಿ,ರಘುರಾಜ್ ಕದ್ರಿ, ಪ್ರೇಮನಾಥ್ ಬಳ್ಳಾಲ್ ಭಾಗ್, ದಿನೇಶ್ ಪಿಎಸ್, ಇಂದಿರಾ ನಾಗೇಶ್, ಪರಮೇಶ್ವರ್, ರಜನೀಶ್, ಶಶೀಂದ್ರ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು

Comments are closed.