ಕರಾವಳಿ

ಸ್ಟೇಟ್‌ಬ್ಯಾಂಕ್ ಬಳಿ ಪಾರ್ಕ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ : ಕಲ್ಲಿನಿಂದ ಹೊಡೆದು ಕೊಲೆ ಶಂಕೆ!

Pinterest LinkedIn Tumblr

ಮಂಗಳೂರು, ಮೇ.08: ನಗರದ ಸ್ಟೇಟ್ ಬ್ಯಾಂಕ್ ಬಳಿಯ ಪಾರ್ಕ್ ನಲ್ಲಿ ಇಂದು ಮುಂಜಾನೆ ಅಪರಿಚಿತ ವ್ಯಕ್ತಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಯುವಕನ ತಲೆ ಹಾಗೂ ಮುಖಕ್ಕೆ ಕಲ್ಲು ಹಾಗೂ ಹಂಚಿನಿಂದ ಹೊಡೆದು ಕೊಲೆ ಮಾಡಿರುವ ಆರೋಪಿಗಳು ಬಳಿಕ ಮೃತದೇಹದ ಮೇಲೆ ಸಿಮೆಂಟ್ ಚಪ್ಪಡಿಯನ್ನು ಇರಿಸಿದ್ದು ಕಂಡು ಬಂದಿದೆ, ಮೃತನ ಗುರುತು ಪತ್ತೆಯಾಗಿಲ್ಲ.

ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Comments are closed.