ಮಂಗಳೂರು : ಲೋಕಸಭಾ ಚುನಾವಣಾ ಪ್ರಚಾರದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಯ ನಾಯಕಿ ತಾರಾ ಪ್ರಚಾರಕರೂ ಆಗಿರುವ ಶ್ರೀಮತಿ ತಾರಾ ಅವರು ನಾಳೆ ( ಗುರುವಾರ 04/04/2019) ಮಂಗಳೂರಿಗೆ ಆಗಮಿಸಲಿದ್ದು, ಮಧ್ಯಾಹ್ನ 12.15ಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಸುರತ್ಕಲ್ ಕೃಷ್ಣಾಪುರಕ್ಕೆ ಚಿತ್ರನಟಿ ತಾರಾ:
ಸಂಜೆ 6.30ಕ್ಕೆ, ಕೃಷ್ಣಾಪುರದ ಕೇಂದ್ರ ಮೈದಾನದಲ್ಲಿ (ಯುವಕ ಮಂಡಲದ ಮುಂಭಾಗ) ಲೋಕಸಭಾ ಚುನಾವಣಾ ಪ್ರಚಾರದ ಪ್ರಯುಕ್ತ ಬಿಜೆಪಿಯ ಮಹಿಳಾ ನಾಯಕಿ, ಚಲನಚಿತ್ರ ನಟಿ, ವಿಧಾನಪರಿಷತ್ ಸದಸ್ಯೆ ಶ್ರೀಮತಿ ತಾರಾ ಅವರು ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿರುವರು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
Comments are closed.