ಕುಂದಾಪುರ: ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ಶುಕ್ರವಾರ ಉಡುಪಿ ನ್ಯಾಯಾಯಕ್ಕ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಮೂರುದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಹೆಚ್ಚಿನ ತನಿಖೆ ಹಿನ್ನೆಯಲ್ಲಿ ಪೊಲೀಸರು ಚಂದ್ರ ಕೆ. ಹೆಮ್ಮಾಡಿ ನ್ಯಾಯಾಯಕ್ಕೆ ಹಾಜರು ಪಡಿಸಿ, ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು.
ದೌರ್ಜನ್ಯ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯಲ್ಲಿ ಮತ್ತಷ್ಟು ಪ್ರಕರಣ ದಾಖಲಾಗಿದ್ದು, ಗುರುವಾರ ಐದು ಹಾಗೂ ಶುಕ್ರವಾರ ಮತ್ತೆ ಆರು ಪ್ರಕರಣ ದಾಖಾಗಿದ್ದು, ಎರಡು ದಿನದಲ್ಲಿ ಹನ್ನೊಂದು ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.
ಇನ್ನು ಕಸ್ಟಡಿಯಲ್ಲಿರುವ ಸಲಿಂಗಕಾಮಿ ಪತ್ರಕರ್ತ ಚಂದ್ರ ಕೆ. ತನಿಖೆಗೆ ಸಹಕಾರ ನೀಡುತ್ತಿದ್ದಾನೆಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭಿಸಿದೆ.
Comments are closed.